ಬುಧವಾರ, ಸೆಪ್ಟೆಂಬರ್ 25, 2019

ನೇರಳೆ:


* ನೇರಳೆ ತೊಗಟೆ ಮತ್ತು ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿಯ ರೋಗಗಳು ಗುಣವಾಗುತ್ತದೆ.
* ಅಜೀರ್ಣದಿಂದ ವಾಂತಿ ಆಗುತ್ತಿದ್ದರೆ 10-20 ಮಿಲಿ ನೇರಳೆ ಹಣ್ಣಿನ ರಸವನ್ನು ಸೇವಿಸಿದರೆ ವಾಂತಿ ನಿಲ್ಲುತ್ತದೆ.
* ನೇರಳೆ ಹಣ್ಣಿನ ರಸಕ್ಕೆ ನಿಂಬೆ ರಸವನ್ನು ಸೇರಿಸಿ ಮುಖಕ್ಕೆ ಲೇಪನೆ ಮಾಡಿದರೆ ಮೊಡವೆಯಿಂದ ಆದ ರಂದ್ರಗಳು ಮುಚ್ಚಿ ಮುಖವು ಕಾಂತಿಯುತವಾಗುತ್ತದೆ.
* ಚರ್ಮದಲ್ಲಿ ಹುಲುಕಡ್ಡಿಯಾಗಿದ್ದರೆ ನೇರಳೆ ಹಣ್ಣಿನ ರಸವನ್ನು ಲೇಪಿಸಿದರೆ ಹುಲುಕಡ್ಡಿ ಗುಣವಾಗುತ್ತದೆ.
* ನೇರಳೆ ಎಲೆಗಳನ್ನು ಜಜ್ಜಿ ಸುಟ್ಟ ಗಾಯದ ಕಲೆಗೆ ಲೇಪಿಸಿದರೆ, ಕ್ರಮೇಣವಾಗಿ ಕಲೆಗಳು ಕಡಿಮೆಯಾಗುತ್ತದೆ.
* ನೇರಳೆ ಬೀಜದ ಪುಡಿಯನ್ನು ಹಾಲಿನಲ್ಲಿ ಕಲಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ಕಡಿಮೆಯಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ