ಮಂಗಳವಾರ, ನವೆಂಬರ್ 26, 2019

ನಿಮ್ಮ ಅಡುಗೆ ಮನೆಗೆ ಸಂಬಂಧಪಟ್ಟ ಕೆಲವೊಂದು ಉಪಯುಕ್ತ ಟಿಪ್ಸ್ ಗಳು…!!

ಆಲೂಗೆಡ್ಡೆಯನ್ನು ಬೇಯಿಸುವಾಗ ಸ್ವಲ್ಪ ಉಪ್ಪು ಹಾಕಿದರೆ ಅದರ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.

ಸ್ವಲ್ಪ ಉಪ್ಪು ಸೇರಿಸಿದ ಬಿಸಿ ನೀರಿನಲ್ಲಿ ಪನೀರನ್ನು ಅದ್ದಿ ಗ್ರೇವಿ ತಯಾರಿಸಿದರೆ ಪನೀರ್‌ ಬೇಗ ಮೃದುವಾಗುತ್ತದೆ.

ಬೇಯಿಸುವ ಮೊದಲು ತರಕಾರಿಗಳನ್ನು ಚೆನ್ನಾಗಿ ಹುರಿದು ಬೇಯಿಸಿದರೆ ಬೇಗನೇ ಬೇಯುತ್ತವೆ ಜೊತೆಗೆ ಅವುಗಳ ರುಚಿಯೂ ದುಪ್ಪಟ್ಟಾಗುತ್ತದೆ. ಇನ್ನೊಂದು ವಿಷಯವೇನೆಂದರೆ ಫ್ರಿಜ್ ನಿಂದ ತೆಗೆದ ತರಕಾರಿಗಳನ್ನು ತಕ್ಷಣ ಉಪಯೋಗಿಸಬೇಡಿ.

ಅಡುಗೆಗೆ ಬಳಸುವ ಪ್ರತಿಯೊಂದು ಸಾಮಗ್ರಿ ಬೇಯಲು ಅದರದೆ ಆದ ನಿರ್ದಿಷ್ಟ ಸಮಯವಿರುತ್ತದೆ. ಉದಾಹರಣೆಗೆ ಅಡುಗೆ ಮಾಡುವಾಗ ಮೊದಲು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ನಂತರ ಟೊಮ್ಯಾಟೋ ಹಾಕಿ ಹುರಿಯಬೇಕು.

ತರಕಾರಿಗಳಲ್ಲಿನ ಪೋಷಕಾಂಶಗಳು ಮತ್ತು ಬಣ್ಣಗಳನ್ನು ಹಾಗೇ ಉಳಿಸಲು, ಅವುಗಳನ್ನು ಸ್ಟೀಮಿಂಗ್ ಅಥವಾ ಸ್ಟೈರ್ ಪ್ರೈ ಮಾಡಿ. ಇದರಿಂದ ಪೋಷಕಾಂಶ ನಷ್ಟವಾಗುವುದಿಲ್ಲ.

ನೀವು ತರಕಾರಿಗಳನ್ನು ಹುರಿಯುವಾಗ ಅವನ್ನು ಒಂದು ಪಾನ್ ನಲ್ಲಿ ಹಾಕಿ ಎಣ್ಣೆಯನ್ನು ಸ್ಪ್ರೇ ಮಾಡಿ. ಇದು ಅಡುಗೆಯ ಸಮಯದಲ್ಲಿ ತರಕಾರಿಗಳು ಎಣ್ಣೆಯನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.

ಬಟಾಟೆ ಉಪಯೋಗಿಸುವ ಮುಂಚಿನ ದಿನ ಫ್ರಿಡ್ಜಿಂದ ಹೊರಗೆ ತೆಗೆದಿಡಿ. ನಂತರ ಬಟಾಣಿಯನ್ನು ಬೇಯಿಸುವಾಗ ಸ್ವಲ್ಪ ಸಕ್ಕರೆ ಹಾಕಿದರೆ ಅದರ ಹಸಿರು ಬಣ್ಣ ಹಾಗೆಯೇ ಉಳಿಯುತ್ತದೆ.

ತೊಗರಿ ಬೇಳೆಗೆ ಒಂದು ಚಮಚ ಎಣ್ಣೆ ಹಾಕಿ ಬೇಯಿಸಿದರೆ ಅದು ಉಕ್ಕದೆ ಸುಲಭವಾಗಿ ಬೇಯುತ್ತದೆ.

ಆಲೂಗಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪಿನ ನೀರಲ್ಲಿ ನೆನೆಸಿಟ್ಟು ನಂತರ ಬೇಯಿಸಿ.

ಆಲೂಗಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪಿನ ನೀರಲ್ಲಿ ನೆನೆಸಿಟ್ಟು ನಂತರ ಬೇಯಿಸಿ.

ಬೇಯಿಸಿದ ನೂಡಲ್ಸ್‌ ಅಥವಾ ಪಾಸ್ತಾವನ್ನು ತಂಪು ನೀರಿಗೆ ಹಾಕಿದರೆ ಸುಲಭವಾಗಿ ಎಳೆಗಳನ್ನು ಬೇರ್ಪಡಿಸಬಹುದು.

ಉಪ್ಪಿಟ್ಟು, ಅವಲಕ್ಕಿಯಂಥ ಸಾಮಾನ್ಯ ತಿಂಡಿಗೆ ಉಪ್ಪು ಜಾಸ್ತಿಯಾದರೆ ಇನ್ನಷ್ಟು ನಿಂಬೆರಸ ಹಿಂಡಿದರೆ ಉಪ್ಪಿನಂಶ ಕಡಿಮೆಯಾಗುತ್ತದೆ.

ಸಾಮಾನ್ಯವಾಗಿ ಗಡಿಬಿಡಿಯಲ್ಲಿ ಅಡಿಗೆ ಮಾಡುವಾಗ ಆಹಾರದಲ್ಲಿ ಉಪ್ಪು ಹೆಚ್ಚಾಗಿದ್ದರೆ ತಲೆ ಕೆಡಿಸಿಕೊಳ್ಳಬೇಡಿ ಅದಕ್ಕೆ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಹಾಕಿ ಬಿಡಿ. ಆಲೂಗಡ್ಡೆ ಉಪ್ಪನ್ನು ಹೀರಿಕೊಳ್ಳುತ್ತದೆ.

ಮೊಸರು ಹುಳಿಹುಳಿಯಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ಎರಡು ತಾಸು ಬಿಡ್ಡು ನೀರನ್ನು ಬಸಿದರೆ ಮೊಸರು ಮತ್ತೆ ಸಿಹಿಯಾಗಿರುತ್ತದೆ.

ಈಗಿನ ಕಾಲದಲ್ಲಿ 80 ವರ್ಷ ಬದುಕುವುದೇ ಒಂದು ದೊಡ್ಡ ವಿಚಾರ, ಮಹಾಭಾರತ ಕಾಲದಲ್ಲಿ ನೂರಾರು ವರ್ಷ ಹೇಗೆ ಬದುಕುತ್ತಿದ್ದರು ಗೊತ್ತೇ?

ಈಗಿನ ಕಾಲದಲ್ಲಿ 80 ವರ್ಷ ಬದುಕಿದರೆ ಅದು ದೊಡ್ಡ ಸಾಧನೆ ಇನ್ನು ಯಾರಾದರೂ 100 ವರ್ಷ ಬದುಕಿದ್ದಾರೆ ಎಂದರೆ ಜನ ಅವರನ್ನು ಆಶ್ಚರ್ಯದಿಂದ ನೋಡುತ್ತಾರೆ. ಈಗ 70 ವರ್ಷ ವಯಸ್ಸಾಯಿತೆಂದರೆ ದಾರಿ ಹತ್ತಿರವಾಯಿತು ಎಂದು ಹೇಳುವ ಪರಿಪಾಟಲಾಗಿದೆ. ಹಾಗಾದರೆ ಮಹಾಭಾರತದ ಕಾಲದಲ್ಲಿ ಹೇಗೆ ನೂರಾರು ವರ್ಷ ಬದುಕುತ್ತಿದ್ದರು ಗೊತ್ತೇ.

ಇಂತಹ ವ್ಯಕ್ತಿಗಳ ಪ್ರಕಾರ ವರ್ಷ ಎಂದರೆ ನಾವು ನೋಡುವ ಕ್ಯಾಲೆಂಡರ್ ನಲ್ಲಿ ಕಾಣುವ ಲೆಕ್ಕಾಚಾರವಲ್ಲ. ಮನುಷ್ಯನಿಗೆ ಎರಡು ಗಡಿಯಾರಗಳಿವೆ, ಒಂದು ದೇಹದ ಹೊರಗಿನ ಗಡಿಯಾರ ಮತ್ತು ದೇಹದ ಒಳಗಿನ ಗಡಿಯಾರ. ಹೊರಗಿನ ಗಡಿಯಾರದ ಸಮಯವನ್ನು ಇಂದಿನ ಸೂರ್ಯೋದಯದಿಂದ ನಾಳಿನ ಸೂರ್ಯೋದಯದವರೆಗೆ ಒಂದು ದಿನ ಅಥವಾ 24 ಘಂಟೆಗಳು ಎಂದು ಕರೆಯುತ್ತೇವೆ.

ದೇಹದ ಒಳಗಿನ ಗಡಿಯಾರ ಸೂರ್ಯೋದಯದಿಂದ-ಸೂರ್ಯೋದಯದವರೆಗೆ ಒಂದು ದಿನದ ಲೆಕ್ಕ ಹಿಡಿಯುವುದಿಲ್ಲ. ಅಲ್ಲಿನ ಘಂಟೆಯೇ, ನಿಮಿಷದ ಮತ್ತು ಕ್ಷಣದ ಮುಳ್ಳುಗಳು ಬೇರೆ. ಅಲ್ಲಿಯ ಸೆಕೆಂಡ್ ಅಥವಾ ಒಂದು ಕ್ಷಣದ ಮುಳ್ಳು ಎಂದರೆ ಅದು ಒಂದು ಉಸಿರು, ಒಂದು ದಿನ ಎಂದರೆ 21,600 ಉಸಿರುಗಳು, ಅಂದರೆ ಇಷ್ಟು ಬಾರಿ ನೀವು ಉಸಿರಾಡಿದಾಗ ಒಂದು ದಿನ ಮುಗಿದಂತೆ.

ಇನ್ನು ಇದನ್ನು ಸರಿಯಾಗಿ ವಿವರಿಸಬೇಕೆಂದರೆ, ನಾವು ಸಾಮಾನ್ಯವಾಗಿ 4 ಸೆಕೆಂಡಿಗೆ 1 ಉಸಿರು, ಒಂದು ನಿಮಿಷಕ್ಕೆ 15 ಉಸಿರು, 1 ಘಂಟೆಗೆ 900 ಉಸಿರು ಹೀಗೆ ನಾವು ಒಂದು ದಿನಕ್ಕೆ 21,600 ಉಸಿರಾಡುತ್ತೇವೆ. ಒಂದು ವೇಳೆ ನಾವು ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರೆ 4 ಸೆಕೆಂಡಿಗೆ ಉಸಿರು ಬಿಡುವ ಬದಲು ನಿಧಾನವಾಗಿ 8 ಸೆಕೆಂಡಿಗೆ ಉಸಿರು ಬಿಡುತ್ತೀರ.

ಆಗ ನೀವು ದಿನಕ್ಕೆ 21,600 ಉಸಿರುಗಳ ಬದಲು 10,800 ಉಸಿರು ಬಿಡುತ್ತೀರ ಅಂದರೆ ಆಗ ಹೊರಗೆ 24 ಘಂಟೆ ಮುಗಿದಾಗ ನಿಮ್ಮ ದೇಹದಲ್ಲಿನ ಘಂಟೆಗೆ ಇನ್ನು 12 ಘಂಟೆಯಾಗಿರುತ್ತದೆ. ಹೊರಗಿನ ಎರಡು ದಿನ ಒಳಗಿನ ಒಂದೇ ದಿನ. ಹೀಗೆ ನಿತ್ಯ ಅಭ್ಯಾಸ ಮಾಡಿ ಒಂದು ಉಸಿರು ಬಿಡಲು 16, 32 ಸೆಕೆಂಡುಗಳು ಅಥವಾ ಒಂದು ನಿಮಿಷಕ್ಕೆ ಒಂದು ಬಾರಿಯಂತೆ ಉಸಿರು ಬಿಡುವ ಹಾಗೆ ಪ್ರಾಣಾಯಾಮ ಮಾಡಿದರೆ ನಿಮ್ಮ ದೇಹದ ಆಯಸ್ಸು ಹೆಚ್ಚುತ್ತದೆ.

ನೀವು 16 ಸೆಕೆಂಡಿಗೆ ಒಂದು ಬಾರಿ ಉಸಿರು ಬಿಟ್ಟರೆ ಹೊರಗಿನ 4 ದಿನ ನಿಮ್ಮ ದೇಹದ ಒಂದು ದಿನ ಇದ್ದಂತೆ ಅಂದರೆ ಪೂರ್ತಿ ವಯಸ್ಸಿನಲ್ಲಿ ಹೊರಗಿನ 400 ವರ್ಷ ನಿಮ್ಮ ದೇಹದ 100 ವರ್ಷ, ಇದೆ ಲೆಕ್ಕದಿಂದ ನಿಮ್ಮ ವಯಸ್ಸು 400 ವರ್ಷವಾಗುತ್ತದೆ. ಇದೆ ಕಾರಣಕ್ಕೆ ಮಹಾಭಾರತದಲ್ಲಿ ಮಹಾ ಬಲಿಭೀಷ್ಮ, ದ್ರೋಣಾಚಾರ್ಯ, ಕೃಪಾಚಾರ್ಯರು 500 ಅಥವಾ 600 ವಯಸ್ಸು ಬದುಕಿದ್ದು.

ಮನುಷ್ಯನ ಒಂದು ಶ್ವಾಸಕೊಶಕ್ಕೆ 77,76,00,000 (ಎಪ್ಪತೇಳು ಕೋಟಿ ಎಪ್ಪತೇಳು ಲಕ್ಷ) ಉಸಿರಾಡುವ ಸಾಮರ್ಥ್ಯವಿದೆ. ಅಂದರೆ ನೀವು ದಿನಕ್ಕೆ 21,600 ಉಸಿರುಗಳನ್ನು ತೆಗೆದುಕೊಂಡರೆ ನಿಮ್ಮ ಶ್ವಾಸಕೊಶ ಕೇವಲ 100 ವರ್ಷ ಬದುಕುತ್ತದೆ ಅದೇ ನೀವು ಪ್ರಾಣಾಯಾಮದ ಮೂಲಕ ಉಸಿರನ್ನು ನಿಯಂತ್ರಿಸಲು ಕಲಿತರೆ ನೀವು 100 ವರ್ಷದಲ್ಲಿಯೇ 400 ವರ್ಷಗಳಷ್ಟು ಜೀವಿಸಬಹುದಾಗಿದೆ.

ಇನ್ನು ಹಿಮಾಲಯದಲ್ಲಿ ಕೆಲ ಋಷಿಗಳು, ಸಾಧು ಸಂತರು ಮತ್ತು ಯೋಗಿಗಳಿಗೆ 200 ವರ್ಷ ಅಥವಾ 300 ವರ್ಷ ವಯಸ್ಸು ಎಂದೆಲ್ಲ ನೀವು ಕೇಳಿರುತ್ತೀರ. ಅವರ ವಯಸ್ಸಿನ ಗುಟ್ಟು ಇದೆ. ಪ್ರಾಣಾಯಾಮದಿಂದ ಆಯಸ್ಸು ವೃದ್ಧಿಯಾಗುತ್ತದೆ ಎನ್ನುವುದು ಇದೆ ಕಾರಣಕ್ಕೆ.

ನಿಂಬೆ ಹಣ್ಣಿನ ರಸ ಹೀರಿದ್ಮೇಲೆ ಮಿಕ್ಕಿದನ್ನು ಬಿಸಾಕುತ್ತಿದ್ದೀರಾ?? ಇದನ್ನು ಓದಿದ ಮೇಲೆ ನೀವು ಇನ್ಯಾವತ್ತೂ ಹಾಗೆ ಮಾಡೋಲ್ಲ..

ನಿಂಬೆ ಹಣ್ಣನ್ನು ಕತ್ತರಿಸಿದ ನಂತರ ರಸವನ್ನು ಉಪಯೋಗಿಸಿದ ನಂತರ ಅದರ ಸಿಪ್ಪೆ ಕಸದ ಬುಟ್ಟಿ ಸೇರುತ್ತೆ. ನಿಂಬೆಹಣ್ಣಿನ ಸಿಪ್ಪೆಯಲ್ಲಿ ಅತ್ಯಧಿಕ ವಿಟಮಿನ್ ಸಿ ಇರುವುದರಿಂದ ಅವುಗಳಿಂದ ಅನೇಕ ಉಪಯೋಗ ಪಡೆಯಬಹುದು. ಬಹು ಉಪಯೋಗಕ್ಕೆ ಬರುವ ಸಿಪ್ಪೆಗಳು ಸರಿಯಾದ ಉಪಯೋಗವನ್ನು ತಿಳಿಯದೆ ಸುಮ್ಮನೆ ವ್ಯರ್ಥವಾಗಿಹೋಗುತ್ತೆ. ಆದರೆ ಅದರಲ್ಲಿರುವ ಅಂಶಗಳ ಬಗ್ಗೆ ತಿಳಿದುಕೊಂಡರೆ ಅವುಗಳ ಉಪಯೋಗವನ್ನು ಸಂಪೂರ್ಣವಾಗಿ ಪಡೆಯಬಹುದು. ಸುಮ್ಮನೆ ಕಸಕ್ಕೆ ಬಿಸಾಡಿ ವ್ಯರ್ಥ ಮಾಡದೆ ಸಿಪ್ಪೆಗಳನ್ನೂ ಸಮರ್ಥವಾಗಿ ಬಳಕೆ ಮಾಡಿಕೊಂಡರೆ ಉತ್ತಮ.

ವಿಟಮಿನ್-ಸಿ ಆಗರವಾಗಿರುವ ನಿಂಬೆಹಣ್ಣು ತಿನ್ನಲು ಎಷ್ಟು ರುಚಿ ಕರವೋ ಆರೋಗ್ಯಕ್ಕೂ ಅಷ್ಟೇ ಲಾಭಕಾರಿ. ಆದರೆ ಇದರ ಸಿಪ್ಪೆಯೂ ಅಷ್ಟೇ ಪಯುಕ್ತವಾಗಿದ್ದು. ಮೈಕ್ರೋವೇವ್‌ನಲ್ಲಿ ಜಿಡ್ಡುಗಳು ತುಂಬಿರುತ್ತವೆ. ಈ ರೀತಿಯಾದ ಜಿಡ್ಡನ್ನು ತೆಗೆಯಲು ಅರ್ಧ ನೀರು ತುಂಬಿದ ಪಾತ್ರೆಗೆ ಒಂದೆರಡು ನಿಂಬೆ ಸಿಪ್ಪೆ ಹಾಕಿ ಮೈಕ್ರೋವೇವ್‌ನಲ್ಲಿ ಹೈ ಟೆಂಪರೇಚರ್‌ನಲ್ಲಿ 5 ನಿಮಿಷ ಬೇಯಿಸಿ. ಈಗ ಅದರ ಗೋಡೆಗಳಲ್ಲಿ ಹಬೆಯು ಸಂಗ್ರಹವಾಗಿರುತ್ತದೆ. ಪಾತ್ರೆ ಹೊರತೆಗೆದು ಮೈಕ್ರೋವೇವ್ ನನ್ನು ಚೆನ್ನಾಗಿ ಉಜ್ಜಿ ಬಟ್ಟೆಯಿಂದ ಒರೆಸಿದರೆ ಜಿಡ್ಡು ಮಾಯವಾಗಿ ನಿಂಬೆಯ ಪರಿಮಳದೊಂದಿಗೆ ಮೈಕ್ರೋವೇವ್‌ ಸ್ವಚ್ಛವಾಗುತ್ತದೆ.

ಬಟ್ಟೆಯಲ್ಲಿ ಸಾರು ಸಾಂಬಾರು ಮುಂತಾದ ಕಲೆ ಉಂಟಾದರೆ ತಕ್ಷಣವೇ ಆ ಜಾಗಕ್ಕೆ ನಿಂಬೆ ಸಿಪ್ಪೆಯಿಂದ ಉಜ್ಜಿ ನಂತರ ಡಿಟರ್ಜಂಟ್‌ನಿಂದ ವಾಶ್‌ ಮಾಡಿ. ಕಲೆ ಮಾಯವಾಗುತ್ತದೆ. ನಿಂಬೆ ಸಿಪ್ಪೆಯನ್ನು ಒಂದು ಬೌಲ್‌ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದರಿಂದ ಅಡಿಗೆ ಮನೆಯಲ್ಲಿ ಉಂಟಾಗುವ ವಾಸನೆ ಮಾಯವಾಗಿ ಸುವಾಸನೆಯುಕ್ತವಾಗುತ್ತದೆ.


ಹಣ್ಣು-ತರಕಾರಿಗಳು ಫ್ರೆಶ್‌ ಆಗಿರಲು, ನೀರಿಗೆ ಸ್ವಲ್ಪ ಉಪ್ಪು ಹಾಗೂ ನಿಂಬೆ ಸಿಪ್ಪೆಯನ್ನು ಹಾಕಿ 5 ನಿಮಿಷಗಳ ನಂತರ ಆ ನೀರಿನಲ್ಲಿ ಹಣ್ಣು-ತರಕಾರಿಗಳನ್ನು ಅದರಲ್ಲಿ ಮುಳುಗಿಸಿಡಿ. ಆನಂತರ ತೆಗೆದು ಒಣಗಿದ ಬಟ್ಟೆಯಿಂದ ಒರೆಸಿದರೆ ಫ್ರೆಶ್ನೆಸ್‌ ಹಾಗೆಯೇ ಇರುತ್ತದೆ. ಆಯುಧಗಳ ತುದಿಗೆ ನಿಂಬೆಹಣ್ಣಿನ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿದರೆ ಮೊಂಡಾದ ಆಯುಧಗಳು ಹರಿತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.


ಜಿಡ್ಡಿರುವ ಪಾತ್ರೆಯಲ್ಲಿ ನಿಂಬೆಹಣ್ಣಿನ ಸಿಪ್ಪೆಗೆ ಸ್ವಲ್ಪ ಉಪ್ಪು ಚಿಮುಕಿಸಿ ನಂತರ ಆ ಸಿಪ್ಪೆಯಿಂದ ಪಾತ್ರೆಯನ್ನು ಚೆನ್ನಾಗಿ ತಿಕ್ಕಿ. ಜಿಡ್ಡು ಮಾಯವಾಗಿ ಪಾತ್ರೆ ಹೊಳೆಯುತ್ತದೆ. ಇರುವೆ ಅಥವಾ ಕೀಟಗಳಿರುವ ಜಾಗದಲ್ಲಿ ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಿನೋಡಿ. ಇರುವೆಗಳು ಪುನಃ ಬರುವುದಿಲ್ಲ. ನಿಂಬೆಹಣ್ಣಿನ ಸಿಪ್ಪೆಯಿಂದ, ಜಿರಲೆಗಳಿಂದಲೂ ಮುಕ್ತಿ ಹೊಂದಬಹುದು.

ಅಡಿಗೆ ಮಾಡುವಾಗ ಪತ್ರೆ ಸೀದುಹೋಗಿದ್ದರೆ ಅಥವಾ ತಳ ಹಿಡಿದಿರುವ ಪಾತ್ರೆಗಳಿಗೆ ಸ್ವಲ್ಪ ನೀರನ್ನು ಮತ್ತು ನಿಂಬೆ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ನೀರನ್ನು ತೆಗೆದು ಅದಕ್ಕೆ ಸ್ವಲ್ಪ ಅಡಿಗೆ ಸೋಡಾ ಹಾಕಿ ನಿಂಬೆ ಸಿಪ್ಪೆಯಿಂದ ತಿಕ್ಕಿ. ಸಿದಿದ ಕಲೆ ಮಾಯವಾಗಿ ಪಾತ್ರೆ ಹೊಳೆಯುವುದರ ಜೊತೆಗೆ ಸಿದಿದ ವಾಸನೆ ಕೂಡ ಇರುವುದಿಲ್ಲ.  ಫ್ರಿಡ್ಜ್‌ ನಲ್ಲಿ ನಿಂಬೆಹಣ್ಣಿನ ಸಿಪ್ಪೆಯನ್ನು ಇಡೀ ಇದರಿಂದ ನೀವು ಫ್ರಿಡ್ಜ್‌ ಬಾಗಿಲು ತೆಗೆದಾಗ ಪರಿಮಳವಾದ ವಾಸನೆ ಬರುತ್ತದೆ.

ಫ್ಲಾಸ್ಕ್‌ಗಳ ಕ್ಲೀನರ್‌ ಪ್ಲಾಸ್ಕ್‌ಗಳಿಗೆ ಬಿಸಿಯಾದ ನೀರು ತುಂಬಿಸಿ. ಅದರೊಳಗೆ ನಿಂಬೆಹಣ್ಣಿನ ಸಿಪ್ಪೆಯನ್ನು ಹಾಕಿ, 5ರಿಂದ10 ನಿಮಿಷದ ನಂತರ, ಚೆನ್ನಾಗಿ ಕುಲಕಿ ಆನಂತರ ಬಿಸಿನೀರಿನಿಂದ ತೊಳೆದರೆ ಪ್ಲಾಸ್ಕ್‌ ಅಥವಾ ಕಾಫಿ ಕೆಟಲ್‌ ಸುವಾಸನೆಯುಕ್ತವಾಗುತ್ತದೆ.