ಮಂಗಳವಾರ, ಡಿಸೆಂಬರ್ 24, 2019
ಶಂಖದ ಮಹತ್ವ
ಅಪೆಂಡಿಕ್ಸ್ ನಿವಾರಣೆ ಮಾಡಲು ಇರುವ ಕೆಲವು ನೈಸರ್ಗಿಕ ಮನೆಮದ್ದುಗಳು; ಶಸ್ತ್ರಚಿಕಿತ್ಸೆಗೆ ಮೊರೆ ಹೋಗುವ ಮುನ್ನ ಒಮ್ಮೆ ಹೀಗೆ ಮಾಡಿ ನೋಡಿ..
ಮಂಗಳವಾರ, ಡಿಸೆಂಬರ್ 17, 2019
ವಾಸ್ತು ದೋಷ ಹಾಗೂ ಆರೋಗ್ಯದ ಸಮಸ್ಯೆಗಳಿಗೆ ಎಕ್ಕೆಯಲ್ಲಿದೆ ಮದ್ದು
ಗ್ಯಾಸ್ಟ್ರಿಕ್ ನಿವಾರಿಸುವ ಸುಲಭ ಮನೆಮದ್ದುಗಳಿವು!
ಭಾನುವಾರ, ಡಿಸೆಂಬರ್ 15, 2019
ಮನೆಯಲ್ಲಿರುವ ಇರುವೆಗಳು ನಿಮ್ಮ ಸಂತೋಷ ಹಾಗೂ ದುಃಖವನ್ನ ಸೂಚಿಸುತ್ತವೆ ಹೇಗೆ ಗೊತ್ತಾ?
ಮನೆಯಲ್ಲಿನ ದವಸ ಧಾನ್ಯಗಳಲ್ಲಿ ಹುಳಗಳಾಗದಂತೆ ಮಾಡುವ ಸುಲಭ ಉಪಾಯ
ಗುರುವಾರ, ಡಿಸೆಂಬರ್ 12, 2019
ಜ್ವರ ಬಂದಾಗ ತಕ್ಷಣ ಹೀಗೆ ಮಾಡಿದರೆ ಕಡಿಮೆ ಆಗುತ್ತದೆ.!!
ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆಗೆ ಈ ಆಹಾರ ತಿನ್ನಬೇಕು..!!
ಸ್ಪೂನ್ ಇದನ್ನು ಸೇವಿಸಿದರೆ ಜನ್ಮದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಹತ್ತಿರ ಕೂಡ ಸುಳುವುದಿಲ್ಲ !
ಕಾಮಕಸ್ತೂರಿ
ಸೋಮವಾರ, ಡಿಸೆಂಬರ್ 9, 2019
ಖರ್ಜೂರ
ಮಂಗಳವಾರ, ನವೆಂಬರ್ 26, 2019
ನಿಮ್ಮ ಅಡುಗೆ ಮನೆಗೆ ಸಂಬಂಧಪಟ್ಟ ಕೆಲವೊಂದು ಉಪಯುಕ್ತ ಟಿಪ್ಸ್ ಗಳು…!!
ಈಗಿನ ಕಾಲದಲ್ಲಿ 80 ವರ್ಷ ಬದುಕುವುದೇ ಒಂದು ದೊಡ್ಡ ವಿಚಾರ, ಮಹಾಭಾರತ ಕಾಲದಲ್ಲಿ ನೂರಾರು ವರ್ಷ ಹೇಗೆ ಬದುಕುತ್ತಿದ್ದರು ಗೊತ್ತೇ?
ನಿಂಬೆ ಹಣ್ಣಿನ ರಸ ಹೀರಿದ್ಮೇಲೆ ಮಿಕ್ಕಿದನ್ನು ಬಿಸಾಕುತ್ತಿದ್ದೀರಾ?? ಇದನ್ನು ಓದಿದ ಮೇಲೆ ನೀವು ಇನ್ಯಾವತ್ತೂ ಹಾಗೆ ಮಾಡೋಲ್ಲ..
ಭಾನುವಾರ, ಅಕ್ಟೋಬರ್ 6, 2019
ಭಗವಾನ್ ಶ್ರೀ ರಾಮ ವಿಷ್ಣು ಲೋಕಕ್ಕೆ ಪಯಣ ಮಾಡಿದ ರಹಸ್ಯ
ಭಗವಾನ್ ಶ್ರೀ ರಾಮ ಭೂಮಿಯ ಮೇಲೆ ಸರಿ ಸುಮಾರು 10 ಸಾವಿರ ವರ್ಷಗಳ ಕಾಲಕ್ಕಿಂತ ಹೆಚ್ಚು ಕಾಲ ರಾಜ್ಯಭಾರ ಮಾಡಿದ್ದಾನೆಂದು ಪುರಾಣಗಳಲ್ಲಿ ಉಲ್ಲಖವಾಗಿದೆ ಇಂತಹ ಶ್ರೀ ರಾಮ ಭೂ ಲೋಕವನ್ನು ಬಿಟ್ಟು ಮತ್ತೆ ವಿಷ್ಣು ಲೋಕಕ್ಕೆ ಹೋಗಲು ಕಾರಣವಾದಂತಹ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮ್ಮ ಜೊತೆ ಹಂಚಿಕೊಳ್ಳುತ್ತಾ ಇದ್ದೇವೆ. ಒಮ್ಮೆ ಭಗವಾನ್ ಶ್ರೀ ರಾಮನ ಆಸ್ಥಾನಕ್ಕೆ ಸಂತನೊಬ್ಬನ ಆಗಮನ ಆಗುತ್ತದೆ ಹೀಗೆ ಬಂದಂತಹ ಸಂತ ಭಗವಾನ್ ಶ್ರೀ ರಾಮನ ಬಳಿ ತಾನು ಏಕಾಂತದಲ್ಲಿ ಚರ್ಚೆ ಮಾಡಬೇಕು ಎಂದು ಕೇಳಿಕೊಳ್ಳುತ್ತಾನೆ.
ಆ ಸಂತನ ಮನವಿಗೆ ಸಮ್ಮತಿ ಸೂಚಿಸುವ ಭಗವಾನ್ ಶ್ರೀ ರಾಮ ಈ ಸಂತನನ್ನು ಒಂದು ಕೋಣೆ ಒಳಗೆ ಕರೆದುಕೊಂಡು ಹೋಗುತ್ತಾನೆ ಹೀಗೆ ಈ ಸಂತನನ್ನು ಕೊನೆ ಒಳಗೆ ಕರೆದು ಕೊಂಡು ಹೋಗುವ ಮುಂಚೆ ತಾನು ತನ್ನ ಲಕ್ಷ್ಮಣನನ್ನು ಕರೆದ ಶ್ರೀ ರಾಮ ತನ್ನ ಮತ್ತು ಈ ಸಂತನ ಚರ್ಚೆಗೆ ಯಾರೂ ಕೂಡ ಭಂಗ ತರದಂತೆ ನೋಡಿಕೋ ಎಂದು ಹೇಳಿ ಹೋಗುತ್ತಾನೆ ಅಷ್ಟೆ ಅಲ್ಲದೆ ಯಾರು ಕೂಡ ಈ ಕೋಣೆ ಒಳಗೆ ಪ್ರವೇಶ ಮಾಡಿದರೆ ಅಂತವರಿಗೆ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸುವುದಾಗಿ ಕೂಡ ಶ್ರೀ ರಾಮ ಲಕ್ಷ್ಮಣನ ಬಳಿ ಹೇಳಿ ಹೋಗುತ್ತಾನೆ. ಅಣ್ಣನ ಮಾತನ್ನು ಎಂದೂ ಮೀರದ ಲಕ್ಷಣ ಈ ಕೋಣೆಯನ್ನು ಅವನು ಕಾಯುತ್ತಾ ಇರುತ್ತಾನೆ.
ಹೀಗೆ ಸಂತನ ರೂಪದಲ್ಲಿ ಬಂದಿದ್ದು ಕಾಲದೇವ ಆಗಿರುತ್ತಾನೆ ಕಾಲದೇವ ಭಗವಾನ್ ಶ್ರೀ ರಾಮನ ಬಳಿ ತಾವು ಭೂ ಲೋಕಕ್ಕೆ ಬಂದ ಕಾರ್ಯ ಸಂಪೂರ್ಣಗೊಂಡಿದೆ ಈಗ ವಿಷ್ಣು ಲೋಕಕ್ಕೆ ತೆರಳುವ ಸಮಯ ಬಂದಿದೆ ಎಂದು ತಿಳಿಸುತ್ತಾನೆ ಅದೇ ಸಮಯಕ್ಕೆ ಸರಿಯಾಗಿ ಈ ಕೋಣೆ ಹತ್ತಿರ ದೂರ್ವಾಸ ಮುನಿಗಳು ಬರುತ್ತಾರೆ. ಬಂದವರು ಲಕ್ಷ್ಮಣನ ಬಳಿ ತಾನು ಈಗಲೇ ಶ್ರೀ ರಾಮನನ್ನು ನೋಡಬೇಕು ಎಂದು ಕೇಳಿ ಕೊಳ್ಳುತ್ತಾರೆ ಆಗ ಅದಕ್ಕೆ ಒಪ್ಪದ ಲಕ್ಷಣ ಅಣ್ಣನನ್ನು ಈಗ ನೋಡಲು ಸಾಧ್ಯವಿಲ್ಲ ಎಂದು ದೂರ್ವಾಸ ಮುನಿಗೆ ತಿಳಿಸುತ್ತಾರೆ.
ಇದರಿಂದ ಕೋಪಗೊಂಡ ದೂರ್ವಾಸ ಮುನಿಗಳು ಒಂದು ವೇಳೆ ನೀನು ಏನಾದರೂ ಈಗ ಶ್ರೀ ರಾಮನನ್ನು ಭೇಟಿ ಆಗಲು ನನ್ನನು ಬಿಡದಿದ್ದರೆ ಶ್ರೀ ರಾಮನಿಗೆ ಕಠೋರವಾದ ಶಾಪವನ್ನು ನೀಡುವುದಾಗಿ ಎಚ್ಚರಿಕೆ ನೀಡುತ್ತಾರೆ ದೂರ್ವಾಸ ಮುನಿಗಳ ಕೋಪ ಮತ್ತು ಶಾಪದ ಪ್ರಭಾವವನ್ನು ಅರಿತಿರುವ ಲಕ್ಷ್ಮಣ ಇಕ್ಕಟ್ಟಿಗೆ ಸಿಲುಕಿ ಕೊನೆಗೆ ಏನು ಮಾಡಬೇಕು ಎಂದು ತಿಳಿಯದ ಲಕ್ಷ್ಮಣ ತಾನೇ ಕೋಣೆ ಒಳಗೆ ಹೋಗುತ್ತಾನೆ ಹೀಗೆ ಚರ್ಚೆಯ ನಡುವೆ ಭಂಗ ತಂದ ಲಕ್ಷ್ಮಣನನ್ನು ನೋಡಿ ಶ್ರೀ ರಾಮ ಗಲಿ ಬಿಲಿ ಗೊಳ್ಳುತ್ತಾನೆ. ಆಗ ಲಕ್ಷ್ಮಣನನ್ನು ಹೊರಹಾಕುತ್ತಾರೆ. ಕೊನೆಗೆ ರಾಜ್ಯ ಭಾರವನ್ನು ತನ್ನ ಮತ್ತು ತನ್ನ ತಮ್ಮನ ಮಕ್ಕಳಿಗೆವಹಿಸಿ ಸರಯೂ ನದಿಯ ಬಳಿ ಶ್ರೀ ರಾಮ ಮುಳುಗಿ ವಿಷ್ಣು ದೇವನ ರೂಪದಲ್ಲಿ ದರ್ಶನ ಕೊಟ್ಟು ಎಲ್ಲರಿಗೂ ಆಶೀರ್ವಾದ ಮಾಡುತ್ತಾನೆ.
ಮೈಸೂರು ಪಾಕ್ ಜನ್ಮ ತಾಳಿದ್ದು ಹೇಗೆ ಅಂದ್ರೆ
ಸಿಹಿ ತಿನಿಸುಗಳಲ್ಲಿ ಮೈಸೂರನ್ನು ದೇಶ ವಿದೇಶಗಳಿಗೆ ಪರಿಚಯ ಮಾಡುತ್ತಿರುವ ಏಕೈಕ ಸಿಹಿ ಅಂದರೆ ಅದು ಮೈಸೂರು ಪಾಕ್. ಇವತ್ತಿನ ಈ ಲೇಖನದಲ್ಲಿ ಮೈಸೂರು ಪಾಕ್ ಹೇಗೆ ಹುಟ್ಟಿದ್ದು ಎಂಬುದರ ಬಗ್ಗೆ ಒಂದು ಕುತೂಹಲಕಾರಿ ಮಾಹಿತಿ ನಾವು ನಿಮ್ಮ ಜೊತೆ ಹಂಚಿಕೊಳ್ಳುತ್ತೇವೆ. ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾ ಸುರ ಮಾದಪ್ಪ ನವರು ಮೈಸೂರು ಪಾಕವನ್ನು ಪರಿಚಯ ಮಾಡಿದರು ಕಾಕಸುರ ಮಾದಪ್ಪ ನವರಿ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ಜಯ ಚಾಮರಾಜೇಂದ್ರ ಒಡೆಯರ್ ಆಡಳಿತ ಅವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ಮಾಡುವಂತಹ ಕೆಲಸದ ಜವಾಬ್ಧಾರಿ ಹೊತ್ತುಕೊಂಡಿದ್ದರು.
ಕಾಕಾಸುರ ಮಾದಪ್ಪ ನವರು ರಾಜ ಕುಟುಂಬಕ್ಕೆ ಬೇಕಾದಂತಹ ಸಿಹಿ ಮತ್ತು ಖಾರ ಪದಾರ್ಥವನ್ನು ಕೂಡ ತಯಾರು ಮಾಡುತ್ತಿದ್ದರಂತೆ ಅದೊಂದು ದಿನ ಮಹಾರಾಜರು ಹೊಸ ಬಗೆಯ ಸಿಹಿ ತಿಂಡಿ ಒಂದನ್ನು ಮಾಡುವಂತೆ ಹೇಳಿದರು ಆಗ ಮಾದಪ್ಪನವರು ತಮಗೆ ತೋಚಿದ ರೀತಿಯಲ್ಲಿ ಒಂದು ಸಿಹಿ ತಿಂಡಿಯನ್ನು ಮಾಡಲು ಮುಂದಾದರು ಕಡಲೆ ಹಿಟ್ಟು ಸಕ್ಕರೆ ಎಣ್ಣೆ ಸೇರಿಸಿ ಒಂದು ಸಿಹಿ ತಿನಿಸನ್ನು ತಯಾರು ಮಾಡಿದರು ಹೀಗೆ ಮಾದಪ್ಪ ಅವರು ತಯಾರಿಸಿದ ಈ ಸಿಹಿ ತಿಂಡಿ ಮಹಾರಾಜರಿಗೆ ತುಂಬಾ ಇಷ್ಟವಾಯಿತು ಮತ್ತು ಮದಪ್ಪನವರ ಬಳಿ ಮಹಾರಾಜರು ಈ ಸಿಹಿ ತಿಂಡಿಯ ಹೆಸರು ಏನು ಎಂದು ಕೇಳಿದರು ಆಗ ಮಾದಪ್ಪ ಈ ಸಿಹಿ ತಿಂಡಿಗೆ ನಾನೂ ಏನು ಹೆಸರು ಇಟ್ಟಿಲ್ಲ ನೀವೇ ಯಾವುದಾದರೂ ಒಂದು ಹೆಸರು ಹೇಳಿ ಎಂದು ಹೇಳುತ್ತಾರೆ.
ಆಗ ಮಹಾರಾಜರು ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ ಹಾಗಾಗಿ ಮೈಸೂರು ಅರಮನೆಯಲ್ಲಿ ತಯಾರಾದ ಈ ರುಚಿ ಶುಚಿಯಾದ ಈ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಕರಿಯೋಣ ಎಂದು ಹೇಳುತ್ತಾರೆ ಅಂದಿನಿಂದ ಇಂದಿನವರೆಗೂ ಈ ಸಿಹಿ ತಿಂಡಿ ಮೈಸೂರು ಪಾಕ್ ಎಂದೇ ಪ್ರಸಿದ್ಧಿ ಆಗಿದೆ. ಕಾಕಸುರ ಮಾದಪ್ಪ ಭಟ್ಟರ ವಂಶಸ್ಥರು ಮೈಸೂರು ನಗರದಲ್ಲಿ ವಾಸವಾಗಿದ್ದು ಗುರು ಸ್ವೀಟ್ಸ್ ಎಂಬ ಅಂಗಡಿಯನ್ನು ಹೊಂದಿದ್ದಾರೆ. ಗುರು ಸ್ವೀಟ್ಸ್ ಇಂದಿಗೂ ಮೈಸೂರು ಪಾಕ್ ನ ರುಚಿಯನ್ನು ಉಳಿಸಿಕೊಂಡು ಬಂದಿದ್ದು ಅಂಗಡಿಯ ಮಾಹಿತಿ ಇದ್ದವರು ಈಗಲೂ ಅಲ್ಲಿಯೇ ಮೈಸೂರು ಪಾಕ್ ಖರೀದಿ ಮಾಡುತ್ತಾರೆ.
ಮೈಸೂರು ಮಲ್ಲಿಗೆ ಮೈಸೂರು ವಿಲ್ಯೆದೆಲೆ ಜೊತೆಗೆ ಮೈಸೂರು ಪಾಕ್ ಗೆ ಸಹಾ ಸ್ಥಾನ ಇದ್ದೇ ಇದೆ. ಈಗ ಎಲ್ಲರ ಬಾಯಿಯಲ್ಲಿ ಈ ಸಿಹಿ ತಿಂಡಿಯು ನೀರುರಿಸುತ್ತದೆ. ಇದು ಈಗ ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ ಸಮೃದ್ಧ ಸಿಹಿ ಭಕ್ಷ್ಯ ಆಗಿದೆ. ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ. ಇದಕ್ಕೆ ಸಕ್ಕರೆ ಕಡಲೆಹಿಟ್ಟು ಎಣ್ಣೆ ತುಪ್ಪ ಏಲಕ್ಕಿ ಬಳಸಿ ಮಾಡಲಾಗುತ್ತದೆ. ಈ ಸಿಹಿಯ ರಚನೆ ಮಿಠಾಯಿ ಗಳಿಗೆ ಹೋಲುತ್ತದೆ. ಇದು ಸಾಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರೆ ಹಬ್ಬಗಳಲ್ಲಿ ಬಡಿಸಲಾಗುತ್ತದೆ.
ಹಾಲಿನ ಜೊತೆ ಈ ಆಹಾರಗಳನ್ನು ತಿಂದರೆ ಅದು ವಿಷ ಆಗುತ್ತದೆ
ಹಾಲು ನಮ್ಮ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ನೀಡುವ ಆಹಾರ ದ್ರವ ಪದಾರ್ಥಗಳಲ್ಲಿ ಒಂದು ದಿನ ಹುಟ್ಟುವುದರಿಂದ ದಿನ ಕೊನೆವರೆಗೆ ಹಾಲು ನಮ್ಮ ದಿನ ನಿತ್ಯದ ಜೀವನಕ್ಕೆ ಬಹಳ ಮುಖ್ಯ ಅಷ್ಟೆ ಅಲ್ಲದೇ ತಾಯಿಯ ಎದೆ ಹಾಲನ್ನು ಹೊರತು ಪಡಿಸಿದರೆ ಇಡೀ ಪ್ರಪಂಚವನ್ನೇ ಎಲ್ಲಾ ಜೀವ ರಾಶಿಗಳನ್ನು ಕಾಪಾಡುವುದು ಈ ಹಾಲು ಮನೆಯಲ್ಲಿ ಆಸ್ಪತ್ರೆಯಲ್ಲಿ ಶಾಲೆಗಳಲ್ಲಿ ಹೆಚ್ಚಾಗಿ ಟೀ ಅಂಗಡಿ ಅಥವಾ ಹೋಟೆಲ್ಗಳಲ್ಲಿ ಈ ಹಾಲನ್ನು ಹೆಚ್ಚಾಗಿ ಬಳಸುತ್ತಾರೆ ಈ ಹಾಲು ನಮ್ಮ ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುತ್ತದೆ.
ಆದರೆ ಈ ಹಾಲು ಸೇವನೆಯೂ ಮುನ್ನ ಹಾಲು ಸೇವನೆಯ ನಂತರ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬಾರದು ಸೇವಿಸಿದ್ದೇ ಆದರೆ ನಮ್ಮ ಆರೋಗ್ಯಕ್ಕೆ ತುಂಬಾ ತೊಂದರೆಗಳನ್ನು ನಾವು ಎದುರಿಸಬೇಕಾಗುತ್ತದೆ ಆದ್ದರಿಂದ ಈ ಲೇಖನದಲ್ಲಿ ಹಾಲಿನ ಜೊತೆ ತಿನ್ನ ಬಾರದ ಕೆಲವು ಆಹಾರ ಪದಾರ್ಥಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದು ಕೊಳ್ಳೋಣ ಈ ಲೇಖನವನ್ನು ಪೂರ್ತಿಯಾಗಿ ಓದಿ. ನಮ್ಮ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವ ಹಾಲಿನ ಜೊತೆ ಮೀನಿನ ಸಾರನ್ನು ತಿನ್ನಬಾರದು ಅಂದರೆ ಮೀನಿನ ಮಾಂಸವನ್ನು ತಿನ್ನಬಾರದು.
ಇದರಿಂದ ನಮ್ಮ ದೇಹದಲ್ಲಿ ತುಂಬಾ ಬದಲಾವಣೆ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ ಆದ್ದರಿಂದ ತಿಂದ 2 ಗಂಟೆಯ ನಂತರ ಹಾಲನ್ನು ಕುಡಿಯ ಬಹುದು ಅಥವಾ ತಿಂದ 2 ಗಂಟೆಯ ನಂತರ ಹಾಲನ್ನು ಕುಡಿಯಬಹುದು. ಮೊಸರನ್ನು ಪ್ರತಿಯೊಬ್ಬರೂ ತಿನ್ನುತ್ತಾರೆ ಅದರಿಂದ ನಮಗೆ ತುಂಬಾ ಆರೋಗ್ಯಕರ ಸಹಾ ಇದೆ ಆದರೆ ಮೊಸರು ತಿಂದ ನಂತರ ಹಾಲನ್ನು ಕುಡಿದರೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಂತಿ ಹೊಟ್ಟೆ ನೋವು ಅಸಿಡಿಟಿ ಅಂತಹ ಕೆಲವು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ನಾವು ಮೊಸರು ತಿಂದ 2 ಗಂಟೆಯ ನಂತರ ಮಾತ್ರ ಹಾಲನ್ನು ಕುಡಿಯಬಹುದು. ಉಪ್ಪು ಮತ್ತು ಹಾಲನ್ನು ಒಂದೇ ಬಾರಿ ಸೇವಿಸಬಾರದು ಇದು ಆಯುರ್ವೇದದಲ್ಲಿ ತಿಳಿಸಿದ್ದಾರೆ ಆದ್ದರಿಂದ ಉಪ್ಪಿನ ಜೊತೆ ಹಾಲನ್ನು ಕುಡಿಯಬಾರದು.
ಹುಳಿ ಇರುವ ಹಣ್ಣುಗಳು ಅಥವಾ ಆಹಾರ ಹುಳಿ ಇರುವ ಹಣ್ಣುಗಳಲ್ಲಿ ಸಿಟ್ರಿಕ್ ಆಸಿಡ್ ಇರುತ್ತದೆ ಇದು ಹಾಲಿನ ಜೊತೆ ಬೆರೆತರೆ ನಮ್ಮ ಶರೀರವನ್ನು ಅನಾರೋಗ್ಯದ ಗೂಡು ಆಗಿಸುತ್ತದೆ ಇದಕ್ಕೆ ಹುಲಿ ಇರುವ ಹಣ್ಣುಗಳು ಅಥವಾ ಆಹಾರ ಪದಾರ್ಥಗಳನ್ನು ತಿಂದ 2 ಗಂಟೆಯ ನಂತರ ಮಾತ್ರ ಹಾಲನ್ನು ಕುಡಿಯಬೇಕು ಹಾಗಾಗಿ ಇದರಿಂದ ಈ ಪದಾರ್ಥಗಳ ಜೊತೆ ಯಾವುದೇ ಕಾರಣಕ್ಕೂ ಹಾಲನ್ನು ಕುಡಿಯಬಾರದು ಅಥವಾ ಸೇವಿಸಬಾರದು ಹಾಲು ನಮ್ಮ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ನಾವು ತಿಳಿಸಿದ ಆಹಾರದ ಜೊತೆ ಹಾಲನ್ನು ತೆಗೆದು ಕೊಳ್ಳುವುದರಿಂದ ಅಷ್ಟೆ ಅಪಾಯ ಸಹಾ ಈ ಒಂದು ಹಾಲು ಹಾಗಾಗಿ ಇದರಿಂದ ಗಮನವಿಟ್ಟು ಹಾಲನ್ನು ಕುಡಿಯುವ ಮುಂಚೆ ಅಥವಾ ನಂತರ ಇವುಗಳನ್ನು ಕುಡಿಯಬೇಡಿ.
ನೂರೆಂಟು ಖಾಯಿಲೆಗಳಿಗೆ ರಾಮ ಬಾಣ ಒಂದು ತೊಂಡೆಕಾಯಿ
ತೊಂಡೆಕಾಯಿ ಹೆಚ್ಚು ಫೈಬರ್ ಅಂಶವನ್ನು ಹೊಂದಿರುತ್ತದೆ ಇದರಲ್ಲಿ ವಿಟಮಿನ್ ಎ ಬಿ1 ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ ಇದ್ದಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತದೆ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವುದರಲ್ಲಿ ಇದು ಉಪಯೋಗಕ್ಕೆ ಬರುತ್ತದೆ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ತೊಂಡೆಕಾಯಿ ತಿನ್ನುವುದರಿಂದ ಇದು ನಿಮಗೆ ರಾಮಬಾಣ ಇದ್ದಂತೆ ವಾರಕ್ಕೆ ಒಮ್ಮೆ ಆದರೂ ತೊಂಡೆಕಾಯಿ ತಿಂದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಈ ತೊಂಡೆಕಾಯಿಯಲ್ಲಿ ಉತ್ತಮ ಆರೋಗ್ಯ ಅಂಶಗಳೇ ಇವೆ ಈ ಲೇಖನದಲ್ಲಿ ತೊಂಡೆಕಾಯಿ ಬಗ್ಗೆ ತಿಳಿಯೋಣ ಈ ಲೇಖನ ಪೂರ್ತಿಯಾಗಿ ಓದಿರಿ.
ಸ್ನೇಹಿತರೆ ತೊಂಡೆಕಾಯಿ ಹೆಚ್ಚಾಗಿ ಸೇವಿಸುವುದರಿಂದ ಕಫ ಸಮಸ್ಯೆ ದೂರವಾಗುತ್ತದೆ ತೊಂಡೇಕಾಯಿಯಲ್ಲಿ ಇರುವ ಬೀಜಗಳು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಮಲವಿಸರ್ಜನೆ ಸಂಬಂಧಿಸಿದ ಕಾಯಿಲೆಗಳನ್ನು ಗುಣ ಪಡಿಸುತ್ತದೆ ದೇಹದ ಯಾವುದೇ ಭಾಗದಲ್ಲಿ ಹುಳು ಕಚ್ಚಿ ಗಾಯ ಆದರೆ ತೊಂಡೆಕಾಯಿ ಎಲೆಯನ್ನು ಚಚ್ಚಿ ಹಚ್ಚುವುದರಿಂದ ಅದು ನಿವಾರಣೆ ಆಗುತ್ತದೆ ವಿಟಮಿನ್ ಸಿ ವಿಟಮಿನ್ ಬಿ2 ವಿಟಮಿನ್ ಬಿ3 ಹೇರಳವಾಗಿ ಸಿಗುವ ತೊಂಡೆಕಾಯಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ತೊಂಡೆಕಾಯಿ ಎಲೆ ರಸವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆ ಆಗುತ್ತದೆ.
ಎರಡು ಚಮಚ ತೊಂಡೆಕಾಯಿ ಎಲೆ ರಸವನ್ನು ಅರ್ಧ ಬಟ್ಟಲು ಮೊಸರಿನ ಜೊತೆ ದಿನಕ್ಕೆ 2 ಬಾರಿ ಸೇವಿಸಿದರೆ ಬೇಧಿ ನಿಲ್ಲುತ್ತದೆ. ತೊಂಡೆಕಾಯಿ ಹಸಿ ಹಣ್ಣನ್ನು ದಿನಕ್ಕೆ ಎರಡರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದು ಆಗುತ್ತದೆ ಹಾಗೂ ಮಧುಮೇಹ ಗುಣಮುಖ ಆಗುತ್ತದೆ ದೇಹದಲ್ಲಿ ಗುಳ್ಳೆಗಳು ಮತ್ತು ಕಜ್ಜಿ ಆಗಿದ್ದರೆ ತೊಂಡೆಕಾಯಿ ಎಲೆಯನ್ನು ಜಜ್ಜಿ ಈ ಜಾಗಕ್ಕೆ ಲೇಪಿಸಿದರೆ ಈ ಒಂದು ಗುಳ್ಳೆಗಳು ಕಡಿಮೆ ಆಗುತ್ತದೆ. ಋತುಸ್ರಾವದ ಸಮಯದಲ್ಲಿ ತೊಂಡೆಕಾಯಿ ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆ ಆಗುತ್ತದೆ ತೊಂಡೆಕಾಯಿ ಅಲ್ಲಿ ಕಡಿಮೆ ಕ್ಯಾಲೋರಿಗಳು ಇರುತ್ತದೆ ಮತ್ತು ಹೆಚ್ಚು ಹೊತ್ತು ನಮ್ಮ ಹೊಟ್ಟೆ ತುಂಬಿದ ಹಾಗೆ ಇರುತ್ತದೆ ಇದರಿಂದ ನಾವು ಸ್ವಲ್ಪವಾಗಿ ತೂಕವನ್ನು ಕಳೆದುಕೊಳ್ಳಬಹುದು.
ಒಂದು ಲೋಟ ತೊಂಡೆಕಾಯಿ ಎಲೆ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆ ಕುದಿಸಿ ತಯಾರಿಸಿದ ಎಣ್ಣೆಯನ್ನು ಚರ್ಮದ ಕಾಯಿಲೆಗೆ ಇದನ್ನು ಉಪಯೋಗಿಸಬಹುದು. ಪೊಟ್ಯಾಷಿಯಂ ಹೆಚ್ಚಿರುವ ತೊಂಡೆಕಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಣ್ಣುಗಳು ಉರಿ ಆಗುತ್ತಿದ್ದರೆ ಒಂದು ಲೋಟ ನೀರಿಗೆ ಒಂದು ಲೋಟ ತೊಂಡೆಕಾಯಿ ಎಲೆಯ ರಸ ಸೇರಿಸಿ ಒಂದು ಲೋಟ ರಸ ಆಗುವ ವರೆಗೆ ಚೆನ್ನಾಗಿ ಕುದಿಸಿ ಈ ರಸವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಕಣ್ಣಿನ ಉರಿ ಕಡಿಮೆ ಆಗುತ್ತದೆ.
ಒಂದು ಲೋಟ ತೊಂಡೆಕಾಯಿ ಎಲೆ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜೊತೆ ಕುದಿಸಿ ಈ ಎಣ್ಣೆಯನ್ನು ಚರ್ಮದ ಜೊತೆ ಹಚ್ಚಿದರೆ ಸೋಯಾಸಿಸ್ ಅಂತಹ ಚರ್ಮದ ಸಮಸ್ಯೆ ಕಡಿಮೆ ಆಗುತ್ತದೆ ತೊಂಡೆಕಾಯಿ ಕಫದ ಸಮಸ್ಯೆ ನಿವಾರಿಸುತ್ತದೆ ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ ಸಂಧಿ ಊತಗಳು ಇದ್ದರೆ ತೊಂಡೆ ಗಿಡದ ಎಲೆಗಳನ್ನು ಬೇವಿನ ಎಲೆಗಳ ಜೊತೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಊತ ಇರುವ ಜಾಗದಲ್ಲಿ ಲೇಪನ ಮಾಡಿದರೆ ಈ ಊತ ಕಡಿಮೆ ಆಗುತ್ತದೆ. ಎಳೆಯ ತೊಂಡೆಕಾಯಿ ಬಾಯಿಗೆ ಹಾಕಿ ಚೆನ್ನಾಗಿ ಆಗಿದರೆ ಬಾಯಿ ಹುಣ್ಣು ಕಡಿಮೆ ಆಗುತ್ತದೆ.