ಗುರುವಾರ, ಡಿಸೆಂಬರ್ 12, 2019

ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆಗೆ ಈ ಆಹಾರ ತಿನ್ನಬೇಕು..!!

ಮೂಲವ್ಯಾಧಿ ಅಂದರೆ ಪೈಲ್ಸ್ ಈ ಒಂದು ಸಮಸ್ಯೆ ಇಂದಿನ ದಿನದಲ್ಲಿ ಹೆಚ್ಚಾಗಿ ಕಾಡುತ್ತಾ ಇದೆ ಮತ್ತು ಈ ಒಂದು ಸಮಸ್ಯೆ ಗಂಡಸರಿಗೆ ಹೆಚ್ಚು ಬರುವುದು ಅಂತ ಒಂದು ಸಂಶೋಧನೆ ತಿಳಿಸುತ್ತದೆ ಮತ್ತು ಮೂಲವ್ಯಾಧಿ ಸಮಸ್ಯೆ ಪ್ರಪಂಚದಲ್ಲಿ ಐವತ್ತು ಪರ್ಸೆಂಟ್ ಅಷ್ಟು ಜನರಿಗೆ ಬರುತ್ತದೆ ಮತ್ತು ಈ ಸಮಸ್ಯೆ ಬರುವುದಕ್ಕೆ ಮುಖ್ಯ ಕಾರಣವೇನು ಅಂತ ಹೇಳೋದಾದರೆ ವ್ಯಕ್ತಿ ಪಾಲಿಸುವಂತಹ ಆಹಾರ ಪದ್ಧತಿಯಿಂದ.ಹಾಗಾದರೆ ಮೂಲವ್ಯಾಧಿ ಸಮಸ್ಯೆ ಬಂದರೆ ಯಾವೆಲ್ಲ ಆಹಾರ ಪದ್ಧತಿಯನ್ನು ತಿನ್ನಬೇಕು ಮತ್ತು ಮೂಲವ್ಯಾಧಿ ಸಮಸ್ಯೆ ಬರದೇ ಇರುವ ಹಾಗೆ ತಡೆಗಟ್ಟುವುದಕ್ಕೆ ಯಾವ ಆಹಾರ ಪದ್ಧತಿಯನ್ನು ಪಾಲಿಸಬೇಕು ಅನ್ನೋದರ ಬಗ್ಗೆ ನಾವಿಂದು ತಿಳಿಯೋಣ.

ಮೂಲವ್ಯಾಧಿ ಅಂದರೇನು ಅಂತ ಹೇಳೋದಾದರೆ ಮಲ ವಿಸರ್ಜನೆ ಮಾಡುವಂತಹ ಜಾಗದಲ್ಲಿ ನಾಳಗಳು ಇರುತ್ತವೆ ಆ ಒಂದು ನಾಳಗಳು ಉದಿಕೊಂಡರೆ ಪೈಲ್ಸ್ ಅಂತ ಕರೆಯುತ್ತಾರೆ ಮತ್ತು ಈ ರೀತಿ ಆದಾಗ ಆ ಭಾಗ ತುಂಬಾನೇ ನೋವು ಉಂಟು ಮಾಡುತ್ತದೆ ಇನ್ನು ಕೆಲವರಲ್ಲಿ ರಕ್ತಸ್ರಾವ ಆಗುವಂತಹ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ .
ಆದ್ದರಿಂದ ಮೂಲವ್ಯಾಧಿ ಬಂದರೆ ವ್ಯಕ್ತಿ ತುಂಬಾನೇ ನೋವನ್ನು ಅನುಭವಿಸಬೇಕಾಗುತ್ತದೆ , ಮೂಲವ್ಯಾಧಿ ಬಂದರೆ ವ್ಯಕ್ತಿ ಎಲ್ಲಿಯೇ ಕುಳಿತುಕೊಳ್ಳಲು ಕಷ್ಟ ಪಡುತ್ತಾರೆ ಮತ್ತು ಮಲ ವಿಸರ್ಜಿಸಲು ಕೂಡ ಸಾಕಷ್ಟು ಕಷ್ಟವನ್ನು ಪಡುತ್ತಾನೆ ಆದ್ದರಿಂದ ಈ ಸಮಸ್ಯೆಗೆ ಬೇಗನೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

ನಾವು ಇಂದಿನ ಮಾಹಿತಿಯಲ್ಲಿ ಮೂಲವ್ಯಾಧಿ ಸಮಸ್ಯೆ ಬರದೇ ಇರುವ ಹಾಗೆ ತಡೆಗಟ್ಟಲು ಯಾವ ಆಹಾರ ಪದ್ಧತಿಯನ್ನು ಪಾಲಿಸಬೇಕು ಅನ್ನೋದನ್ನ ತಿಳಿಯೋಣ ಯಾಕೆಂದರೆ ಪ್ರಿವೆನ್ಶನ್ ಈಸ್ ಬೆಟರ್ ದೆನ್ ಕ್ಯೂರ್ ಅನ್ನೋ ಮಾತಿನ ಹಾಗೆ ಸಮಸ್ಯೆ ಬರುವ ಮುಂಚೆಯೇ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ ಅಲ್ವಾ .
>> ಮೊದಲನೆಯದಾಗಿ ಮೂಲಂಗಿ ಮತ್ತು ಮೊಸರು ಎರಡು ಪದಾರ್ಥಗಳನ್ನು ಮಿಶ್ರಿತ ಮಾಡಿ ರುಬ್ಬಿ ವಾರಕ್ಕೆ ೩ ಬಾರಿ ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳಬಹುದು .
>> ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ ಶೋಧಿಸಿ ಶೇಖರಣೆ ಮಾಡಿ ಇಟ್ಟುಕೊಂಡು ನಂತರ ಪ್ರತಿದಿನ ಊಟದ ಮೊದಲು ಎರಡು ಮೂರು ಚಮಚ ಕುಡಿಯುವುದರಿಂದ ಈ ರೀತಿ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ .
>> ಬಾಳೆ ಹಣ್ಣಿನೊಂದಿಗೆ ಏಲಕ್ಕಿಯನ್ನು ಬೆರೆಸಿ ತಿನ್ನುವುದರಿಂದ ಈ ಸಮಸ್ಯೆ ಬರುವುದಿಲ್ಲ ಮತ್ತು ಒಂದು ಗ್ಲಾಸ್ ನೀರಿಗೆ ಮೂರು ಹನಿ ನಿಂಬೆರಸವನ್ನು ಹಾಕಿಕೊಂಡು ಕುಡಿಯುವುದರಿಂದ ಕೂಡ ಈ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳಬಹುದು .
>> ಹಳ್ಳಿಯ ಕಡೆ ಮಾವಿನ ಗೊರಟೆ ಎಂದು ಸಿಗುತ್ತದೆ ಅದನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ಬೆಳಗ್ಗೆ ತಿನ್ನುವುದರಿಂದ ಈ ಸಮಸ್ಯೆ ದೂರವಾಗುತ್ತದೆ ಮತ್ತು ಬಿಲ್ವ ಪತ್ರೆಯ ಎಲೆ ತೆಗೆದುಕೊಂಡು ಅದನ್ನು ರಸ ಮಾಡಿಕೊಂಡು ಪ್ರತಿದಿನ ಬೆಳಗ್ಗೆ ಸಂಜೆ ಕುಡಿಯುವುದರಿಂದ ಕೂಡ ಈ ಸಮಸ್ಯೆ ಬರುವುದಿಲ್ಲ .
>> ತುಳಸಿ ಗಿಡದ ಬೀಜಗಳನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಬೆಣ್ಣೆ ಮತ್ತು ಬೆಲ್ಲವನ್ನು ಬೆರೆಸಿ ತಿನ್ನುವುದರಿಂದ ಕೂಡ ಈ ಸಮಸ್ಯೆ ದೂರವಾಗುತ್ತದೆ .
>> ಮುಟ್ಟಿದರೆ ಮುನಿ ಸೊಪ್ಪು ಅಂತ ಕೇಳಿರಬಹುದು ಇದನ್ನು ತೆಗೆದುಕೊಂಡು ಈ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಕೂಡ ಬೇಗನೆ ಈ ಸಮಸ್ಯೆ ದೂರವಾಗುತ್ತದೆ .
>> ಖರ್ಜೂರ ಈ ಒಂದು ಖರ್ಜೂರವನ್ನು ರಾತ್ರಿ ನೆನೆಯಲು ಇಟ್ಟು ಮಾರನೆ ದಿವಸ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನುವುದರಿಂದ ಈ ಸಮಸ್ಯೆ ಖಂಡಿತವಾಗಿಯೂ ದೂರವಾಗುತ್ತದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ