ಒಂದು ಲೋಟ ಮಜ್ಜಿಗೆಗೆ ಒಂದು ಚಮಚ ಜೀರಿಗೆಯ ಪುಡಿ, ಹಾಗೂ ಅರ್ಧ ಚಮಚ ಇಂಗು, ಸ್ವಲ್ಪ ಉಪ್ಪನ್ನ ಹಾಕಿ ಕುಡಿಯುವುದರಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಈ ಸಮಸ್ಯೆ ಇರುವವರು ಒಂದು ಚಮಚ ಓಮ್ ಕಾಳಿಗೆ ಚಿಟಿಕೆ ಉಪ್ಪನ್ನ ಸೇರಿಸಿ ಅಗೆಯಬೇಕು, ಅಗೆಯುತ್ತಾ ಅದರ ರಸವನ್ನ ನುಂಗುವುದರಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ.
ಜೀರಿಗೆ ಹಾಗೂ ಕೊತ್ತೊಂಬರಿ ಬೀಜದ ಜೊತೆಗೆ ಬೆಳ್ಳುಳ್ಳಿಯನ್ನ ಕುದಿಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನ ದಿನಕ್ಕೆ ಕನಿಷ್ಠ ಎರಡು ಬಾರಿಯಾದರು ಕುಡಿಯಬೇಕು. ಒಂದು ಚಮಚ ಶುಂಠಿ ರಸ, ಹಾಗೂ ಒಂದು ಚಮಚ ನಿಂಬೆರಸಕ್ಕೆ ಚಿಟಿಕೆ ಉಪ್ಪನ್ನ ಬೆರೆಸಿ ಊಟದ ನಂತರ ಕುಡಿಯುವುದರಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಅಡುಗೆ ಮಾಡುವಾಗ ಇಂಗು ಹಾಗೂ ಬೆಳ್ಳುಳ್ಳಿಯನ್ನ ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ