ಭಗವಾನ್ ಶ್ರೀ ರಾಮ ಭೂಮಿಯ ಮೇಲೆ ಸರಿ ಸುಮಾರು 10 ಸಾವಿರ ವರ್ಷಗಳ ಕಾಲಕ್ಕಿಂತ ಹೆಚ್ಚು ಕಾಲ ರಾಜ್ಯಭಾರ ಮಾಡಿದ್ದಾನೆಂದು ಪುರಾಣಗಳಲ್ಲಿ ಉಲ್ಲಖವಾಗಿದೆ ಇಂತಹ ಶ್ರೀ ರಾಮ ಭೂ ಲೋಕವನ್ನು ಬಿಟ್ಟು ಮತ್ತೆ ವಿಷ್ಣು ಲೋಕಕ್ಕೆ ಹೋಗಲು ಕಾರಣವಾದಂತಹ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮ್ಮ ಜೊತೆ ಹಂಚಿಕೊಳ್ಳುತ್ತಾ ಇದ್ದೇವೆ. ಒಮ್ಮೆ ಭಗವಾನ್ ಶ್ರೀ ರಾಮನ ಆಸ್ಥಾನಕ್ಕೆ ಸಂತನೊಬ್ಬನ ಆಗಮನ ಆಗುತ್ತದೆ ಹೀಗೆ ಬಂದಂತಹ ಸಂತ ಭಗವಾನ್ ಶ್ರೀ ರಾಮನ ಬಳಿ ತಾನು ಏಕಾಂತದಲ್ಲಿ ಚರ್ಚೆ ಮಾಡಬೇಕು ಎಂದು ಕೇಳಿಕೊಳ್ಳುತ್ತಾನೆ.
ಆ ಸಂತನ ಮನವಿಗೆ ಸಮ್ಮತಿ ಸೂಚಿಸುವ ಭಗವಾನ್ ಶ್ರೀ ರಾಮ ಈ ಸಂತನನ್ನು ಒಂದು ಕೋಣೆ ಒಳಗೆ ಕರೆದುಕೊಂಡು ಹೋಗುತ್ತಾನೆ ಹೀಗೆ ಈ ಸಂತನನ್ನು ಕೊನೆ ಒಳಗೆ ಕರೆದು ಕೊಂಡು ಹೋಗುವ ಮುಂಚೆ ತಾನು ತನ್ನ ಲಕ್ಷ್ಮಣನನ್ನು ಕರೆದ ಶ್ರೀ ರಾಮ ತನ್ನ ಮತ್ತು ಈ ಸಂತನ ಚರ್ಚೆಗೆ ಯಾರೂ ಕೂಡ ಭಂಗ ತರದಂತೆ ನೋಡಿಕೋ ಎಂದು ಹೇಳಿ ಹೋಗುತ್ತಾನೆ ಅಷ್ಟೆ ಅಲ್ಲದೆ ಯಾರು ಕೂಡ ಈ ಕೋಣೆ ಒಳಗೆ ಪ್ರವೇಶ ಮಾಡಿದರೆ ಅಂತವರಿಗೆ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸುವುದಾಗಿ ಕೂಡ ಶ್ರೀ ರಾಮ ಲಕ್ಷ್ಮಣನ ಬಳಿ ಹೇಳಿ ಹೋಗುತ್ತಾನೆ. ಅಣ್ಣನ ಮಾತನ್ನು ಎಂದೂ ಮೀರದ ಲಕ್ಷಣ ಈ ಕೋಣೆಯನ್ನು ಅವನು ಕಾಯುತ್ತಾ ಇರುತ್ತಾನೆ.
ಹೀಗೆ ಸಂತನ ರೂಪದಲ್ಲಿ ಬಂದಿದ್ದು ಕಾಲದೇವ ಆಗಿರುತ್ತಾನೆ ಕಾಲದೇವ ಭಗವಾನ್ ಶ್ರೀ ರಾಮನ ಬಳಿ ತಾವು ಭೂ ಲೋಕಕ್ಕೆ ಬಂದ ಕಾರ್ಯ ಸಂಪೂರ್ಣಗೊಂಡಿದೆ ಈಗ ವಿಷ್ಣು ಲೋಕಕ್ಕೆ ತೆರಳುವ ಸಮಯ ಬಂದಿದೆ ಎಂದು ತಿಳಿಸುತ್ತಾನೆ ಅದೇ ಸಮಯಕ್ಕೆ ಸರಿಯಾಗಿ ಈ ಕೋಣೆ ಹತ್ತಿರ ದೂರ್ವಾಸ ಮುನಿಗಳು ಬರುತ್ತಾರೆ. ಬಂದವರು ಲಕ್ಷ್ಮಣನ ಬಳಿ ತಾನು ಈಗಲೇ ಶ್ರೀ ರಾಮನನ್ನು ನೋಡಬೇಕು ಎಂದು ಕೇಳಿ ಕೊಳ್ಳುತ್ತಾರೆ ಆಗ ಅದಕ್ಕೆ ಒಪ್ಪದ ಲಕ್ಷಣ ಅಣ್ಣನನ್ನು ಈಗ ನೋಡಲು ಸಾಧ್ಯವಿಲ್ಲ ಎಂದು ದೂರ್ವಾಸ ಮುನಿಗೆ ತಿಳಿಸುತ್ತಾರೆ.
ಇದರಿಂದ ಕೋಪಗೊಂಡ ದೂರ್ವಾಸ ಮುನಿಗಳು ಒಂದು ವೇಳೆ ನೀನು ಏನಾದರೂ ಈಗ ಶ್ರೀ ರಾಮನನ್ನು ಭೇಟಿ ಆಗಲು ನನ್ನನು ಬಿಡದಿದ್ದರೆ ಶ್ರೀ ರಾಮನಿಗೆ ಕಠೋರವಾದ ಶಾಪವನ್ನು ನೀಡುವುದಾಗಿ ಎಚ್ಚರಿಕೆ ನೀಡುತ್ತಾರೆ ದೂರ್ವಾಸ ಮುನಿಗಳ ಕೋಪ ಮತ್ತು ಶಾಪದ ಪ್ರಭಾವವನ್ನು ಅರಿತಿರುವ ಲಕ್ಷ್ಮಣ ಇಕ್ಕಟ್ಟಿಗೆ ಸಿಲುಕಿ ಕೊನೆಗೆ ಏನು ಮಾಡಬೇಕು ಎಂದು ತಿಳಿಯದ ಲಕ್ಷ್ಮಣ ತಾನೇ ಕೋಣೆ ಒಳಗೆ ಹೋಗುತ್ತಾನೆ ಹೀಗೆ ಚರ್ಚೆಯ ನಡುವೆ ಭಂಗ ತಂದ ಲಕ್ಷ್ಮಣನನ್ನು ನೋಡಿ ಶ್ರೀ ರಾಮ ಗಲಿ ಬಿಲಿ ಗೊಳ್ಳುತ್ತಾನೆ. ಆಗ ಲಕ್ಷ್ಮಣನನ್ನು ಹೊರಹಾಕುತ್ತಾರೆ. ಕೊನೆಗೆ ರಾಜ್ಯ ಭಾರವನ್ನು ತನ್ನ ಮತ್ತು ತನ್ನ ತಮ್ಮನ ಮಕ್ಕಳಿಗೆವಹಿಸಿ ಸರಯೂ ನದಿಯ ಬಳಿ ಶ್ರೀ ರಾಮ ಮುಳುಗಿ ವಿಷ್ಣು ದೇವನ ರೂಪದಲ್ಲಿ ದರ್ಶನ ಕೊಟ್ಟು ಎಲ್ಲರಿಗೂ ಆಶೀರ್ವಾದ ಮಾಡುತ್ತಾನೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ