ಸಿಹಿ ತಿನಿಸುಗಳಲ್ಲಿ ಮೈಸೂರನ್ನು ದೇಶ ವಿದೇಶಗಳಿಗೆ ಪರಿಚಯ ಮಾಡುತ್ತಿರುವ ಏಕೈಕ ಸಿಹಿ ಅಂದರೆ ಅದು ಮೈಸೂರು ಪಾಕ್. ಇವತ್ತಿನ ಈ ಲೇಖನದಲ್ಲಿ ಮೈಸೂರು ಪಾಕ್ ಹೇಗೆ ಹುಟ್ಟಿದ್ದು ಎಂಬುದರ ಬಗ್ಗೆ ಒಂದು ಕುತೂಹಲಕಾರಿ ಮಾಹಿತಿ ನಾವು ನಿಮ್ಮ ಜೊತೆ ಹಂಚಿಕೊಳ್ಳುತ್ತೇವೆ. ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾ ಸುರ ಮಾದಪ್ಪ ನವರು ಮೈಸೂರು ಪಾಕವನ್ನು ಪರಿಚಯ ಮಾಡಿದರು ಕಾಕಸುರ ಮಾದಪ್ಪ ನವರಿ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ಜಯ ಚಾಮರಾಜೇಂದ್ರ ಒಡೆಯರ್ ಆಡಳಿತ ಅವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ಮಾಡುವಂತಹ ಕೆಲಸದ ಜವಾಬ್ಧಾರಿ ಹೊತ್ತುಕೊಂಡಿದ್ದರು.
ಕಾಕಾಸುರ ಮಾದಪ್ಪ ನವರು ರಾಜ ಕುಟುಂಬಕ್ಕೆ ಬೇಕಾದಂತಹ ಸಿಹಿ ಮತ್ತು ಖಾರ ಪದಾರ್ಥವನ್ನು ಕೂಡ ತಯಾರು ಮಾಡುತ್ತಿದ್ದರಂತೆ ಅದೊಂದು ದಿನ ಮಹಾರಾಜರು ಹೊಸ ಬಗೆಯ ಸಿಹಿ ತಿಂಡಿ ಒಂದನ್ನು ಮಾಡುವಂತೆ ಹೇಳಿದರು ಆಗ ಮಾದಪ್ಪನವರು ತಮಗೆ ತೋಚಿದ ರೀತಿಯಲ್ಲಿ ಒಂದು ಸಿಹಿ ತಿಂಡಿಯನ್ನು ಮಾಡಲು ಮುಂದಾದರು ಕಡಲೆ ಹಿಟ್ಟು ಸಕ್ಕರೆ ಎಣ್ಣೆ ಸೇರಿಸಿ ಒಂದು ಸಿಹಿ ತಿನಿಸನ್ನು ತಯಾರು ಮಾಡಿದರು ಹೀಗೆ ಮಾದಪ್ಪ ಅವರು ತಯಾರಿಸಿದ ಈ ಸಿಹಿ ತಿಂಡಿ ಮಹಾರಾಜರಿಗೆ ತುಂಬಾ ಇಷ್ಟವಾಯಿತು ಮತ್ತು ಮದಪ್ಪನವರ ಬಳಿ ಮಹಾರಾಜರು ಈ ಸಿಹಿ ತಿಂಡಿಯ ಹೆಸರು ಏನು ಎಂದು ಕೇಳಿದರು ಆಗ ಮಾದಪ್ಪ ಈ ಸಿಹಿ ತಿಂಡಿಗೆ ನಾನೂ ಏನು ಹೆಸರು ಇಟ್ಟಿಲ್ಲ ನೀವೇ ಯಾವುದಾದರೂ ಒಂದು ಹೆಸರು ಹೇಳಿ ಎಂದು ಹೇಳುತ್ತಾರೆ.
ಆಗ ಮಹಾರಾಜರು ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ ಹಾಗಾಗಿ ಮೈಸೂರು ಅರಮನೆಯಲ್ಲಿ ತಯಾರಾದ ಈ ರುಚಿ ಶುಚಿಯಾದ ಈ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಕರಿಯೋಣ ಎಂದು ಹೇಳುತ್ತಾರೆ ಅಂದಿನಿಂದ ಇಂದಿನವರೆಗೂ ಈ ಸಿಹಿ ತಿಂಡಿ ಮೈಸೂರು ಪಾಕ್ ಎಂದೇ ಪ್ರಸಿದ್ಧಿ ಆಗಿದೆ. ಕಾಕಸುರ ಮಾದಪ್ಪ ಭಟ್ಟರ ವಂಶಸ್ಥರು ಮೈಸೂರು ನಗರದಲ್ಲಿ ವಾಸವಾಗಿದ್ದು ಗುರು ಸ್ವೀಟ್ಸ್ ಎಂಬ ಅಂಗಡಿಯನ್ನು ಹೊಂದಿದ್ದಾರೆ. ಗುರು ಸ್ವೀಟ್ಸ್ ಇಂದಿಗೂ ಮೈಸೂರು ಪಾಕ್ ನ ರುಚಿಯನ್ನು ಉಳಿಸಿಕೊಂಡು ಬಂದಿದ್ದು ಅಂಗಡಿಯ ಮಾಹಿತಿ ಇದ್ದವರು ಈಗಲೂ ಅಲ್ಲಿಯೇ ಮೈಸೂರು ಪಾಕ್ ಖರೀದಿ ಮಾಡುತ್ತಾರೆ.
ಮೈಸೂರು ಮಲ್ಲಿಗೆ ಮೈಸೂರು ವಿಲ್ಯೆದೆಲೆ ಜೊತೆಗೆ ಮೈಸೂರು ಪಾಕ್ ಗೆ ಸಹಾ ಸ್ಥಾನ ಇದ್ದೇ ಇದೆ. ಈಗ ಎಲ್ಲರ ಬಾಯಿಯಲ್ಲಿ ಈ ಸಿಹಿ ತಿಂಡಿಯು ನೀರುರಿಸುತ್ತದೆ. ಇದು ಈಗ ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ ಸಮೃದ್ಧ ಸಿಹಿ ಭಕ್ಷ್ಯ ಆಗಿದೆ. ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ. ಇದಕ್ಕೆ ಸಕ್ಕರೆ ಕಡಲೆಹಿಟ್ಟು ಎಣ್ಣೆ ತುಪ್ಪ ಏಲಕ್ಕಿ ಬಳಸಿ ಮಾಡಲಾಗುತ್ತದೆ. ಈ ಸಿಹಿಯ ರಚನೆ ಮಿಠಾಯಿ ಗಳಿಗೆ ಹೋಲುತ್ತದೆ. ಇದು ಸಾಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರೆ ಹಬ್ಬಗಳಲ್ಲಿ ಬಡಿಸಲಾಗುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ