ಗುರುವಾರ, ಮಾರ್ಚ್ 17, 2022

🚩 *ವಾದಿರಾಜ ಜಯಂತಿ* 🚩



🚩 *ವಾದಿರಾಜ ಜಯಂತಿ* 🚩

*ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |*

*ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ ||*

ಇಂದು ವಾದಿರಾಜ ಗುರುಸಾರ್ವಭೌಮರ ಜಯಂತಿ. ವಾದಿರಾಜರ ಬೃಂದಾವನವಿರುವ ಶಿರಸಿಯ ಸೋಂದಾ ವಾದಿರಾಜ ಮಠ, ಜನ್ಮಸ್ಥಳವಾದ ಕುಂದಾಪುರ ತಾಲೂಕಿನ ಹೂವಿನಕೆರೆ ಮಠ ಸಹಿತ ವಿವಿಧೆಡೆಗಳಲ್ಲಿ ಸಾವಿರಾರು ಮಂದಿ ಭಕ್ತರು ವಾದಿರಾಜರಿಗೆ ಶರಣಾಗಿ ಕೃತಾರ್ಥರಾಗುವರು.

ಹದಿನೈದನೆಯ ಶತಮಾನದ ಅಂತ್ಯದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೂವಿನಕೆರೆ ಎಂಬ ಕುಗ್ರಾಮದಲ್ಲಿ ಜನಿಸಿದ ವಾದಿರಾಜರ ಪೂರ್ವಾಶ್ರಮದ ಹೆಸರು ಭೂವರಾಹ. ಇವರ ತಂದೆ ರಾಮಾಚಾರ್ಯರು ಹಾಗೂ ಮತ್ತು ತಾಯಿ ಸರಸ್ವತಿದೇವಿ.

ವಾದಿರಾಜ ಗುರುಗಳ ಜನ್ಮಸ್ಥಳ, ಈಗ ಇಲ್ಲಿ ವಾದಿರಾಜರ ಗುಡಿ ಇದೆ. ವಾದಿರಾಜರ ಶೀಲಾ ಮೂರ್ತಿ.

120 ವರ್ಷಗಳ ಕಾಲ ದೇಹಧಾರಿಯಾಗಿದ್ದ ವಾದಿರಾಜರ ಆರಾದ್ಯ ದೈವ ಹಯವದನ. ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರು, ೧೧೨ ವರ್ಷಗಳ ಕಾಲ ಸನ್ಯಾಸಿಯಾಗಿದ್ದವರು. ಆರಂಭದಲ್ಲಿ ಉಡುಪಿಯನ್ನು ತಮ್ಮ ಸಾಧನಾ ತಾಣವನ್ನಾಗಿಸಿದ್ದ ವಾದಿರಾಜ ಗುರುಗಳು, ಬಳೊಕ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಕ್ಷೇತ್ರಕ್ಕೆ ತೆರಳಿದವರು. ನಂತರ ಅಲ್ಲಿಯೇ ಬೃಂದಾವನಸ್ಥರಾದರು.

ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ‘ಹಯವದನ’ ಎಂಬ ಕಾವ್ಯನಾಮದಲ್ಲಿ ಅನೇಕ ಮೇರು ಕೃತಿಗಳನ್ನು ರಚಿಸಿರುವ ವಾದಿರಾಜ ಗುರುಗಳ 343 ಕೀರ್ತನೆಗಳು ಇದುವರೆಗೆ ಲಭ್ಯವಾಗಿವೆ. ಇದರಲ್ಲಿ 9 ದೀರ್ಘ ಕೃತಿಗಳು.

ವಿಜಯನಗರ ಅರಸರು ವಾದಿರಾಜರನ್ನು ಸನ್ಮಾನಿಸುವ ಮೂಲಕ ಧನ್ಯತೆ ಅನುಭವಿಸಿದ್ದರು. ಅಂದು ‘ಕುಡುಮ’ ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ‘ಧರ್ಮಸ್ಥಳ’ವೆಂದು ನಾಮಕರಣ ಮಾಡಿ, ಇಲ್ಲಿ ಅಣ್ಣಪ್ಪ ಪಂಜುರ್ಲಿ ದೈವವನ್ನು ಪ್ರತಿಷ್ಠಾಪನೆ ಮಾಡಿದವರು ವಾದಿರಾಜ ಗುರುಸಾರ್ವಭೌಮರು.

ವಾದಿರಾಜ ಗುರುಗಳು ರಚಿಸಿದ ಕೆಲವು ದೇವರನಾಮಗಳು

ಆವರೀತಿಯಿಂದ ನೀಯೆನ್ನ ಪಾಲಿಪೆ
ಕುದುರೆ ಬಂದಿದೆ,ಚೆಲುವ ಕುದುರೆ ಬಂದಿದೆ
ತಾಳುವಿಕೆಗಿಂತನ್ಯ ತಪವು ಇಲ್ಲ
ದವಳಗಂಗೆಯ ಗಂಗಾಧರ ಮಹಾಲಿಂಗ
ದುಮ್ಮಿ ಸಾಲೆನ್ನಿ
ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ
ರಾಜಬೀದಿಯೊಳಗಿಂದ ಕಸ್ತೂರಿ ರಂಗ
ಲೋಕಭರಿತನೋ ರಂಗ
ವೇಣುನಾದಪ್ರಿಯ.
ವಾದಿರಾಜ ಗುರುಸಾರ್ವಭೌಮರ ಮೇಲೆ ರಚಿಸಲ್ಪಟ್ಟ ಹಾಡುಗಳು
ರಾಜರ ಭಾಗ್ಯವಿದು
ಕನ್ದಿ ಕನ್ದಿ ರಾಜರ ಕನ್ದಿ
ವಾದಿರಾಜರ ಗುರುಗಲಾದ ಮುಖ್ಯಪ್ರಾನ
ಮೇರು ಕೃತಿ

ಮಹಾಭಾರತ ಲಕ್ಷಾಲಂಕಾರ, ತೀರ್ಥ ಪ್ರಬಂಧ

ದೀರ್ಘ ಗೀತೆ
ಶ್ರೀ ಲಕ್ಷ್ಮೀ ಶೋಭಾನೆ (ಸೋಬಾನೆ)

ಇತರ ಕೃತಿಗಳು
ಆಧಿಕರಣ – ನಾಮಾವಳಿ
ಈಶಾವಸ್ಯೋಪನಿಷದ್ ಭಾಷ್ಯ ಟೀಕಾ ಪ್ರಕಾಶಿಕ
ಉಪನ್ಯಾಸಸಾರರತ್ನಮಾಲಾ
ಏಕಾದಶಿ ನಿರ್ಣಯ
ಕೇನೋಪನಿಷದ್ ಟೀಕಾ
ಗುಂಡ – ಕ್ರಿಯೆ
ತೈತ್ತೋರೀಯೋಪನಿಷದ್ ಟೀಕಾ
ನ್ಯಾಯ ರತ್ನಾವಲಿ
ಪಾಖಂಡ ಮತ ಖಂಡನಮ್
ಭಾವ -ಪ್ರಕಾಶಿಕ
ಭೂಗೋಳ ವರ್ಣನಮ್
ಯುಕ್ತಿಮಲ್ಲಿಕಾ
ರುಕ್ಮಿಣೀಶ ವಿಜಯ
ಲಕ್ಷಾಭರಣ ಟೀಕಾ
ವೈಕುಂಠ ವರ್ಣನೆ
ಸರಸಭಾರತಿ ವಿಲಾಸ
ಸ್ತೋತ್ರಗಳು
ಹಯಗ್ರೀವ ಸ್ತುತಿ
ಹಯಗ್ರೀವ ದಂಡಕಮ್
ಚಕ್ರ ಸ್ತುತಿ
ಪರಮ ಸ್ತುತಿ
ದಶಾವತಾರ ಸ್ತೋತ್ರಮ್
ವ್ಯಾಸ ಸ್ತುತಿ
ಋಣಮೋಚನ ಸ್ತೋತ್ರಮ್

For daily updates join our Whatsapp group.

https://chat.whatsapp.com/BWd1rZSvpWv4zuKafY6M1V

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ