ಗುರುವಾರ, ಮಾರ್ಚ್ 17, 2022

ಸಂಕಷ್ಟಹರ ಚತುರ್ಥಿ ವ್ರತ



🔯 *ಸಂಕಷ್ಟಹರ ಚತುರ್ಥಿ ವ್ರತ* 🔯

ಸಂಕಷ್ಟ ಚತುರ್ಥಿಯು ಮಂಗಳವಾರದಂದು ಬಂದರೆ ಅದಕ್ಕೆ 'ಅಂಗಾರಕಿ" ಎಂಬ ವಿಶೇಷ ಮಹತ್ವ. ಅಂಗಾರ ಅಂದರೆ ಸಂಸ್ಕೃತದಲ್ಲಿ ಕೆಂಡ ಎಂದರ್ಥ. ಕೆಂಡದಂತೆ ನಿಗಿನಿಗಿ ಹೊಳೆಯುವುದು ಅಂಗಾರಕ - ಮಂಗಳಗ್ರಹ. ಮಂಗಳನನ್ನು ಭೂಮಿಪುತ್ರನೆಂದೂ ಪುರಾಣಗಳು ಹೇಳುತ್ತವೆ. ಭೂಮಿಪುತ್ರನಾದ್ದರಿಂದ ಭೌಮ. ಮಂಗಳವಾರಕ್ಕೆ ಭೌಮವಾರವೆಂದೂ ಹೆಸರಿದೆ. ಭೂಲೋಕಕ್ಕೆ ಗಣೇಶ ಅಧಿದೇವತೆಯಾಗಿರುವಂತೆಯೇ ಮಂಗಳಕ್ಕೂ ಕೂಡ. ಅದಕ್ಕೆಂದೇ ಮಂಗಳವಾರ ಸಂಕಷ್ಟಿ ಬಂದರೆ ಅದಕ್ಕೆ 'ಅಂಗಾರಕಿ"ಯೆಂಬ ವಿಶೇಷ. 

ಅಂಗಾರಿಕಾ ಸಂಕಷ್ಟಿ🕉

ಚೌತಿ ಎಂದ ಕೂಡಲೇ ಎಲ್ಲರ ಮನದಲ್ಲಿ ಮೂಡುವ ಮೊದಲ ಚಿತ್ರವೇ ಗಣಪತಿ.
ಅದರಲ್ಲೂ ನಾವು ಎರಡು ವಿಧದಲ್ಲಿ ಚತುರ್ಥಿ ನೋಡಬಹುದು.
೧.ಶುಕ್ಲ ಚೌತಿ
ಭಾದ್ರಪದ ಈ ಶುಕ್ಲ ಚೌತಿ ವಿನಾಯಕ ಚೌತಿ.

೨.ಕೃಷ್ಣ ಚೌತಿ

ಕೃಷ್ಣ ಪಕ್ಷದಲ್ಲಿ ಬರುವ ಚೌತಿಯನ್ನು ಕೃಷ್ಣ ಚೌತಿಯನ್ನು ಅಥವಾ ಸಂಕಷ್ಟಿ ಚೌತಿ ಎಂತಲೂ ಕರೆಯಲಾಗುತ್ತದೆ. ಮಂಗಳವಾರದಿಂದ ದಿನ ಕೃಷ್ಣ ಚೌತಿ ಬಂದರೆ ಅದಕ್ಕೆ ಅಂಗಾರಿಕ ಸಂಕಷ್ಟಿ ಎಂದು ಕರೆಯುತ್ತಾರೆ.

ಅಂಗಾರಿಕ ಸಂಕಷ್ಠಿ🕉 ಅಂದರೆ ಗಣಪತಿಗೆ ಎಲ್ಲಿಲ್ಲದ ಪ್ರೀತಿ. ಮಂಗಳ ಅಥವಾ ಕುಜಗ್ರಹನಿಗೆ ಇರುವ ಇನ್ನೊಂದು ಹೆಸರೇ ಅಂಗಾರಕ. ಈ ಅಂಗಾರಕನು ಗಣಪತಿಯನ್ನು ಒಲಿಸಿಕೊಂಡಿರುವ ಕಾರಣದಿಂದ ಮಂಗಳವಾರವು ಗಣಪತಿಗೆ ಅತ್ಯಂತ ಪ್ರಿಯವಾದ ವಾರವಾಗಿದೆ. ಆದುದರಿಂದಲೇ ಗಣಪನು ಮಂಗಳವಾರದಂದು ವಿಶೇಷ ವರಪ್ರದನಾಗಿರುತ್ತಾನೆ. ಇನ್ನು  ಅದರ ಜೊತೆಗೆ ಸಂಕಷ್ಠಿಯು ಸೇರಿದರೆ ಕೇಳಬೇಕೆ?
ಇನ್ನು ಅವನು ಕೊಡುವ ಅನುಗ್ರಹಕ್ಕೆ ಎಣೆಯೇ ಇಲ್ಲದಂತಾಗುವುದು.

ಮಂಗಲಂ ನಿತ್ಯ ಕಲ್ಯಾಣಂ ಲಕ್ಷ್ಮೀ ಸೌಭಾಗ್ಯವರ್ಧನಂ|
ಲಕ್ಷ್ಮೀ ಮನೋರಥಂ ಪ್ರಾಪ್ತಿಕರಂ ಪಂಚಾಂಗಂ ಫಲಮುತ್ತಮಂ||
ತಿಥೇಶ್ಚ ಶ್ರಿಯಮಾಪ್ನೋತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ||
ಕರಣಾತ್ ಚಿಂತಿತಂ ಕಾರ್ಯಂ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾ ಸ್ನಾನಫಲಂ ಲಭೇತ್

For Daily updates join our whatsapp group.

https://chat.whatsapp.com/IN7RfavN6I50nw6HmGJvUz

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ