ಗುರುವಾರ, ಮಾರ್ಚ್ 17, 2022

ರಾಮನುಜಾಚಾರ್ಯರ ಪಾರ್ಥಿವ ಶರೀರ !!!

ರಾಮನುಜಾಚಾರ್ಯರ ಪಾರ್ಥಿವ ಶರೀರ !!!
ಶ್ರೀ. ರಾಮನುಜಾಚಾರ್ಯರು, ತಮ್ಮ120ನೇ ವಯಸ್ಸಿನಲ್ಲಿ 1137ನೇ ಇಸವಿಯಲ್ಲಿ ತನ್ನ ಶಿಷ್ಯರನ್ನೆಲ್ಲ ಒಂದೆಡೆ ಸೇರಿಸಿ ತಮ್ಮದೇ ಒಂದು ಶಿಲಾವಿಗ್ರಹವನ್ನು ರೂಪಿಸುತ್ತಾರೆ. ವಿಗ್ರಹ ತಯಾರಾದ ನಂತರ ಒಂದು ಶುಭದಿನ ಕಾವೇರಿನದಿಯಲ್ಲಿ ಮಿಂದು ತನ್ನದೇ ಶಿಲಾವಿಗ್ರಹದ ಮುಂದೆ ಕುಳಿತು ಶಿಷ್ಯರಿಗೆ ಎಪ್ಪತ್ತಾರು ಆದೇಶಗಳನ್ನು ಭೋಧಿಸಿದರು. 
ನಂತರ ತಾನು ಜೀರ್ಣವಾಗಿರುವ ಶರೀರವನ್ನು ಬಿಟ್ಟು ಈ ಶಿಲಾವಿಗ್ರಹದಲ್ಲಿ ಲೀನವಾಗುತ್ತೇನೆ ಎಂದು ತಿಳಿಸಿ ವಿಗ್ರಹದಲ್ಲಿ ಲೀನವಾದರು. ಆದರೆ ಶಿಷ್ಯಗಣ ಅವರ ದೇಹದ ಅಂತ್ಯಸಂಸ್ಕಾರಕ್ಕೆ ಒಪ್ಪಲಿಲ್ಲ. ಆದುದರಿಂದ ಅವರ ಮೃತದೇಹಕ್ಕೆ ಕಾವೇರಿ ನೀರಿನ ಅಭಿಷೇಕ ಮಾಡಿ ಕರ್ಪೂರದ ಹಾಗೂ ಚಂದನದ ಕುಂಕುಮದ ಲೇಪನ ಹಾಗೂ ಅವರ ಶಿಲಾ ವಿಗ್ರಹದ ಪಕ್ಕದಲ್ಲಿಯೇ ಇಡಲಾಯಿತು. 
ಶ್ರೀ. ರಾಮನುಜಾಚಾರ್ಯರ ಪಾರ್ಥಿವ ಶರೀರವನ್ನು  ತಮಿಳುನಾಡಿನ ಶ್ರೀರಂಗಂ ಶ್ರೀರಂಗನಾಥಸ್ವಾಮಿ ದೇವಾಲಯದ ಐದನೇ ಪ್ರಾಕಾರದಲ್ಲಿ, ಸುಮಾರು 900 ವರ್ಷಗಳಿಂದ ಸಂರಕ್ಷಿಸಿ ಇಡಲಾಗಿದೆ...
ಈ ದೇಹಕ್ಕೆ ವರ್ಷಕ್ಕೆ ಎರಡು ಸಲ ಕರ್ಪೂರ ಚಂದನ ಕೇಸರಿಯನ್ನು ಬಿಟ್ಟರೆ, ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. 
ಅವರ ದೇಹಾಂತ್ಯ ಆದ ನಂತರವೂ ಇಷ್ಟು ವರ್ಷಗಳ ಕಾಲ ಆದೇಹ ಕೆಡದೇ ಇದೆ ಎಂದರೆ ಅವರ ತಪಃ ಶಕ್ತಿ ಎಂತಹುದಾಗಿರಬೇಕು?
"ಓಂ ನಮೋ ನಾರಾಯಣಾಯ"

🙏🙏🙏

ಮಾಹಿತಿ: ಸುವರ್ಣಬಾಬು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ