ಭಾನುವಾರ, ಡಿಸೆಂಬರ್ 25, 2022

ಸಂಕಷ್ಟಹರ ಚತುರ್ಥೀ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌            ‌       ‌                                              ‌                                                                                                         *ಸಂಕಷ್ಟಹರ ಚತುರ್ಥೀ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ..!*

ನಾಳೆ *ಡಿಸೆಂಬರ್ 11, 2022 ರವಿವಾರ, ಸಂಕಷ್ಟಹರ ಚತುರ್ಥೀ*.                                  ‌   ‌                                                                     ‌   ಸಂಕಷ್ಟ ಚತುರ್ಥಿಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ. ಈ ದಿನವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಗಣೇಶನ ಭಕ್ತರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ವಿಧಿ - ವಿಧಾನಗಳ ಪ್ರಕಾರ ಪೂಜೆ ಮಾಡುತ್ತಾರೆ. ಸಂಕಷ್ಟ ಚತುರ್ಥಿ ಪ್ರತಿ ತಿಂಗಳು ಕೃಷ್ಣ ಪಕ್ಷದಲ್ಲಿ ಬರುತ್ತದೆ.                                          ಮಾರ್ಗಶೀರ್ಷ ಮಾಸದ ಕೃಷ್ಣ ಪಕ್ಷದ ಚತುರ್ಥಿಯನ್ನು *ಅಖುರ್ತ ಸಂಕಷ್ಟ ಚತುರ್ಥೀ* ಎಂದು ಕರೆಯಲಾಗುತ್ತದೆ. ಈ ಭಾರಿ ಅಖುರ್ತ ಸಂಕಷ್ಟ ಚತುರ್ಥಿಯನ್ನು ಡಿಸೆಂಬರ್‌ 11 ರಂದು ಭಾನುವಾರ ಆಚರಿಸಲಾಗುವುದು. ಅಖುರ್ತ ಸಂಕಷ್ಟ ಚತುರ್ಥಿ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ಪ್ರಯೋಜನಗಳ ಕುರಿತು ಮಾಹಿತಿ ಇಲ್ಲಿದೆ.
 
*​ಸಂಕಷ್ಟ ಚತುರ್ಥಿ ಮಹತ್ವ:*

'ಸಂಕಷ್ಟ' ಎಂಬ ಪದವು ಸಂಸ್ಕೃತ ಮೂಲವನ್ನು ಹೊಂದಿದೆ, ಸಂಕಷ್ಟಹರ ಇದರರ್ಥ 'ಕಷ್ಟದ ಸಮಯದಲ್ಲಿ ವಿಮೋಚನೆ' ಮತ್ತು 'ಚತುರ್ಥೀ' ಎಂದರೆ ನಾಲ್ಕನೇ ದಿನದ ಪೂಜೆಗೆ ಅರ್ಹವಾದವನು ಎಂದರ್ಥ. ಜೀವನದ ಎದುರಾಗುವ ಎಲ್ಲಾ ಅಡೆತಡೆಗಳಿಂದ ಮುಕ್ತಿ ಹೊಂದಲು, ಸಕಲ ಸಂಕಷ್ಟಗಳನ್ನು ದೂರಾಗಿಸಿಕೊಳ್ಳಲು ಈ ದಿನ ಗಣೇಶನನ್ನು ಪೂಜಿಸಲಾಗುತ್ತದೆ.

ಭಗವಾನ್‌ ಗಣೇಶನು ಶಿವ ಮತ್ತು ಪಾರ್ವತಿ ದೇವಿಯ ಮಗ. ಗಣೇಶನನ್ನು ಮೊದಲು ಪೂಜಿಸುವ ಅತ್ಯಂತ ಪ್ರೀತಿಯ ದೇವರೆಂದು ಪರಿಗಣಿಸಲಾಗಿದೆ ಮತ್ತು ಅವನನ್ನು ಪ್ರಥಮ ಪೂಜ್ಯ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಸಂಕಷ್ಟ ದಿನದಂದು ಉಪವಾಸವನ್ನು ಆಚರಿಸುವ ಮತ್ತು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುವ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ. ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಭಕ್ತರು ಸಮೃದ್ಧ ಜೀವನವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಸಂತಾನವಿಲ್ಲದ ದಂಪತಿಗಳು ಸಂತಾನ ಭಾಗ್ಯವನ್ನು ಪಡೆದುಕೊಳ್ಳುತ್ತಾರೆ.

*​ಸಂಕಷ್ಟ ಚತುರ್ಥಿ ಶುಭ ಮುಹೂರ್ತ:*

ಅಖುರ್ತ ಸಂಕಷ್ಟ ಚತುರ್ಥಿಯು ಮಾರ್ಗಶೀರ್ಷ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ಬರುತ್ತದೆ. ಚತುರ್ಥೀ ತಿಥಿ ಡಿಸೆಂಬರ್‌ 11 ರಂದು ರವಿವಾರ ಸಂಜೆ 4.14 ರಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ಡಿಸೆಂಬರ್ 12 ರಂದು ಸೋಮವಾರ ಸಂಜೆ 6.48 ಕ್ಕೆ ಕೊನೆಗೊಳ್ಳುತ್ತದೆ. 11ರಂದು ಚಂದ್ರೋದಯವೂ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಅಖುರ್ತ ಸಂಕಷ್ಟ ಚತುರ್ಥಿಯ ಉಪವಾಸವನ್ನು ಡಿಸೆಂಬರ್ 11 ರಂದು ಮಾತ್ರ ಆಚರಿಸಲಾಗುತ್ತದೆ. ಉಪವಾಸ ಆಚರಿಸುವ ಜನರು ಚಂದ್ರನನ್ನು ನೋಡಿದ ನಂತರ ಮತ್ತು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರವೇ ಪಾರಣ ಮಾಡುತ್ತಾರೆ. ರಾತ್ರಿ 08-42 ಗಂಟೆ ಸುಮಾರಿಗೆ ಚಂದ್ರೋದಯವಾಗುತ್ತದೆ.

*​ಅಖುರ್ತ ಸಂಕಷ್ಟ ಚತುರ್ಥಿ ಪೂಜೆ ವಿಧಾನ:*

- ಈ ದಿನ ಜನರು ಬೆಳಿಗ್ಗೆ ಬೇಗನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪವಿತ್ರ ಸ್ನಾನ ಮಾಡಬೇಕು.

- ಭಕ್ತರು ಗಣೇಶನ ವಿಗ್ರಹವನ್ನು ಇಟ್ಟು ದೇಸಿ ತುಪ್ಪದಿಂದ ದೀಪವನ್ನು ಬೆಳಗಿಸಬೇಕು.

- ವಿಗ್ರಹವನ್ನು ಹಳದಿ ಹೂವುಗಳಿಂದ ಅಲಂಕರಿಸಿ, ಹಳದಿ ತಿಲಕವನ್ನು ಹಾಕಿ ಮತ್ತು ಮೋದಕಗಳನ್ನು ಅಥವಾ ಸಿಹಿ ತಿಂಡಿಗಳು ಮತ್ತು ಹಣ್ಣುಗಳನ್ನು ಗಣೇಶನಿಗೆ ಅರ್ಪಿಸುತ್ತಾರೆ.

- ಗಣೇಶನಿಗೆ ಪ್ರಿಯವಾದ ವಸ್ತುಗಳಲ್ಲಿ ದೂರ್ವೆಯು (ಗರಿಕೆ) ಪ್ರಮುಖವಾದುದ್ದು. ಆದ್ದರಿಂದ ಈ ದಿನ ಗಣೇಶನಿಗೆ ದೂರ್ವೆಯನ್ನು ಅರ್ಪಿಸಬೇಕು.

- ಶುದ್ಧ ಆತ್ಮದೊಂದಿಗೆ ಉಪವಾಸವನ್ನು ಆಚರಿಸುವ ಸಂಕಲ್ಪವನ್ನು ತೆಗೆದುಕೊಳ್ಳಿ.

- ಉಪವಾಸ ಮುರಿಯುವ ಮೊದಲು ಸಂಜೆ, ಭಕ್ತರು ವ್ರತ ಕಥೆಯನ್ನು ಪಠಿಸುತ್ತಾರೆ ಮತ್ತು ಗಣೇಶನ ಆರತಿಯನ್ನು ಪಠಿಸುತ್ತಾರೆ.

- ಈ ದಿನ ಚಂದ್ರನನ್ನು ನೋಡಿದ ನಂತರ ಉಪವಾಸವನ್ನು ಮುರಿಯಬಹುದು.

*​ಸಂಕಷ್ಟ ಚತುರ್ಥಿ ವ್ರತದಂದು ಉಪವಾಸ ಮಾಡಲು ಸಾಧ್ಯವಾಗದವರು ಇವುಗಳನ್ನು ಸೇವಿಸಬಹುದು:*

- ಒಣ ಹಣ್ಣುಗಳು
- ಫಲಗಳು
- ಉಪ್ಪಿಟ್ಟು (ಈರುಳ್ಳಿ ಬಳಸಿರಬಾರದು)
- ಸಾಬುದಾನ ಪಾಯಸ
- ಸಾಬುದಾನ ಖಿಚಡಿ

*​ಸಂಕಷ್ಟ ಚತುರ್ಥಿ ಮಂತ್ರ:*

- '' ಓಂ ಗಂ ಗಣಪತಯೇ ನಮಃ''

- ''ಓಂ ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ
ಸರ್ವ ಕಾರ್ಯೇಷು ಸರ್ವದಾ ||''.                                                  ‌‌******************************************************
                                                                                                           *ಶ್ರೀ ಸಂಕಷ್ಟಹರ ಗಣಪತಿ ಸ್ತೋತ್ರಂ*

ನಾರದ ಉವಾಚ |
                                                                                            ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ |
ಭಕ್ತಾವಾಸಂ ಸ್ಮರೇನ್ನಿತ್ಯಮ ಆಯುಷ್ಕಾಮಾರ್ಥ ಸಿದ್ಧಯೇ || ೧ ||

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ |
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ || ೨ ||

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ |
ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ || ೩ ||

ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಮ್ |
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ || ೪ ||

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ |
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪರಮ್ || ೫ ||

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ |
ಪುತ್ರಾರ್ಥೀ ಲಭತೇ ಪುತ್ರಾನ್ಮೋಕ್ಷಾರ್ಥೀ ಲಭತೇ ಗತಿಮ್ || ೬ ||

ಜಪೇದ್ಗಣಪತಿಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ |
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ || ೭ ||

ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ |
ತಸ್ಯ ವಿದ್ಯಾ ಭವೇತ್ಸರ್ವಾ ಗಣೇಶಸ್ಯ ಪ್ರಸಾದತಃ || ೮ ||

ಇತಿ ಶ್ರೀನಾರದಪುರಾಣೇ ಸಂಕಷ್ಟನಾಶನಂ ನಾಮ ಗಣೇಶ ಸ್ತೋತ್ರಮ್ |       ‌                                                                        ‌ **************************************************          ‌                          ‌      ‌     ‌     ‌                                                         
ll *ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ* ll 

ಓಂ ಸಂಕಷ್ಟಹರಾಯ ನಮಃ
ಓಂ ಸಂವೃತಪಾರ್ಷ್ಣಿಕಾಯ ನಮಃ
ಓಂ ಸಂಸಾರವೈದ್ಯಾಯ ನಮಃ 
ಓಂ ಸಂವಿದೇ ನಮಃ
ಓಂ ಸುರೂಪಾಯ ನಮಃ
ಓಂ ಸರ್ವನೇತ್ರಾಧಿವಾಸಾಯ ನಮಃ
ಓಂ ಸ್ಮರಪ್ರಾಣದೀಪಕಾಯ ನಮಃ
ಓಂ ಸರ್ವಾತ್ಮನೇ ನಮಃ
ಓಂ ಸರ್ವದೇವಾತ್ಮನೇ ನಮಃ
ಓಂ ಸತ್ಯಶಿರೋರುಹಾಯ ನಮಃ 10

ಓಂ ಸರ್ಪಾಂಗುಲೀಕಾಯ ನಮಃ
ಓಂ ಸೋಮಾರ್ಕಘಂಟಾಯ ನಮಃ
ಓಂ ಸೃಷ್ಟಿಲಿಂಗಾಯ ನಮಃ
ಓಂ ಸದ್ಭಕ್ತಧ್ಯಾನನಿಗಡಾಯ ನಮಃ
ಓಂ ಸ್ವೋಜಸೇ ನಮಃ
ಓಂ ಸಕಾಮದಾಯಿನೀಪೀಠಾಯ ನಮಃ  
ಓಂ ಸ್ಫುರದುಗ್ರಾಸನಾಶ್ರಯಾಯ ನಮಃ 
ಓಂ ಸತ್ಯಾನಿತ್ಯಾವತಂಸಿತಾಯ ನಮಃ
ಓಂ ಸವಿಘ್ನನಾಶಿನೀಪೀಠಾಯ ನಮಃ
ಓಂ ಸರ್ವಶಕ್ತ್ಯಮ್ಬುಜಾಶ್ರಯಾಯ ನಮಃ 20

ಓಂ ಸ್ಥೂಲೋರವೇ ನಮಃ
ಓಂ ಸ್ಥೂಲಕುಕ್ಷಯೇ ನಮಃ
ಓಂ ಸ್ತಬಕಾಕಾರಕುಮ್ಭಾಗ್ರಾಯ ನಮಃ
ಓಂ ಸರ್ಪಹಾರಕಟಿಸೂತ್ರಾಯ ನಮಃ
ಓಂ ಸರ್ಪಯಜ್ಞೋಪವೀತಯೇ ನಮಃ 
ಓಂ ಸರ್ಪಕೋಟೀರಕಟಕಾಯ ನಮಃ
ಓಂ ಸರ್ಪಗ್ರೈವೇಯಕಾಂಗದಾಯ ನಮಃ 
ಓಂ ಸರ್ಪಕಕ್ಷ್ಯೋದರಾಬನ್ಧಾಯ ನಮಃ 
ಓಂ ಸರ್ಪರಾಜೋತ್ತರೀಯಕಾಯ ನಮಃ
ಓಂ ಸರ್ವಾವಯವಸಮ್ಪೂರ್ಣಸರ್ವ
ಲಕ್ಷಣಲಕ್ಷಿತಾಯ ನಮಃ 30

ಓಂ ಸರ್ವಾಭರಣಶೋಭಾಢ್ಯಾಯ ನಮಃ
ಓಂ ಸರ್ವಶೋಭಾಸಮನ್ವಿತಾಯ ನಮಃ 
ಓಂ ಸರ್ವಮಂಗಲಮಾಂಗಲ್ಯಾಯ ನಮಃ 
ಓಂ ಸರ್ವಕಾರಣಕಾರಣಾಯ ನಮಃ
ಓಂ ಸರ್ವದೈಕಕರಾಯ ನಮಃ
ಓಂ ಸರೋಜಭೃತೇ ನಮಃ
ಓಂ ಸ್ವದನ್ತಭೃತೇ ನಮಃ
ಓಂ ಸಪ್ರಮೋದಪ್ರಮೋದನಾಯ ನಮಃ 
ಓಂ ಸಮೇಧಿತಸಮೃದ್ಧಿಶ್ರಿಯೇ ನಮಃ
ಓಂ ಸೇವೋನ್ನಿದ್ರಮದದ್ರವಾಯ ನಮಃ 40

ಓಂ ಸರ್ವಸದ್ಗುರುಸಂಸೇವ್ಯಾಯ ನಮಃ
ಓಂ ಸುಮಂಗಲಸುಮಂಗಲಾಯ ನಮಃ
ಓಂ ಸುಭಗಾಸಂಶ್ರಿತಪದಾಯ ನಮಃ
ಓಂ ಸರಸ್ವತ್ಯಾಶ್ರಯಾಯ ನಮಃ
ಓಂ ಸ್ವಾಹಾಶಕ್ತಯೇ ನಮಃ
ಓಂ ಸಕೀಲಕಾಯ ನಮಃ
ಓಂ ಸರ್ವಕಾಲಿಕಸಂಸಿದ್ಧಯೇ ನಮಃ
ಓಂ ಸರ್ವಜ್ಞಾಯ ನಮಃ
ಓಂ ಸರ್ವಭೇಷಜಭೇಷಜಾಯ ನಮಃ
ಓಂ ಸೃಷ್ಟಿಸ್ಥಿತಿಲಯಕ್ರೀಡಾಯ ನಮಃ 50

ಓಂ ಸುರಕುಂಜರಭೇದನಾಯ ನಮಃ 
ಓಂ ಸಿನ್ದೂರಿತಮಹಾಕುಮ್ಭಾಯ ನಮಃ 
ಓಂ ಸದಸದ್ ವ್ಯಕ್ತಿದಾಯಕಾಯ ನಮಃ 
ಓಂ ಸಾಕ್ಷಿಣೇ ನಮಃ
ಓಂ ಸಮುದ್ರಮಥನಾಯ ನಮಃ
ಓಂ ಸ್ವಸಂವೇದ್ಯಾಯ ನಮಃ
ಓಂ ಸ್ವದಕ್ಷಿಣಾಯ ನಮಃ
ಓಂ ಸ್ವತನ್ತ್ರಾಯ ನಮಃ
ಓಂ ಸತ್ಯಸಂಕಲ್ಪಾಯ ನಮಃ
ಓಂ ಸಾಮಗಾನರತಾಯ ನಮಃ 60

ಓಂ ಸುಖಿನೇ ನಮಃ
ಓಂ ಸೌಭಾಗ್ಯವರ್ಧನಾಯ ನಮಃ
ಓಂ ಸರ್ವವಶ್ಯಕರಾಯ ನಮಃ
ಓಂ ಸಪ್ತರ್ಷಿಭ್ಯೋ ನಮಃ
ಓಂ ಸೃಷ್ಟಯೇ ನಮಃ
ಓಂ ಸದಾಶಿವಾಯ ನಮಃ
ಓಂ ಸಾಧ್ಯೇಭ್ಯೋ ನಮಃ
ಓಂ ಸಮುದ್ರೇಭ್ಯೋ ನಮಃ
ಓಂ ಸರಿದ್ಭ್ಯೋ ನಮಃ
ಓಂ ಸ್ಮೃತ್ಯೈ ನಮಃ 70

ಓಂ ಸೌರಾಯ ನಮಃ
ಓಂ ಸತೇ ನಮಃ
ಓಂ ಸಚೇತನಾಯ ನಮಃ
ಓಂ ಸುಖಾಯ ನಮಃ
ಓಂ ಸತ್ಯಾಯ ನಮಃ
ಓಂ ಸ್ವಸ್ತಿನೆ ನಮಃ
ಓಂ ಸ್ವಧಾಯ ನಮಃ
ಓಂ ಸ್ವಾಹಾಯ ನಮಃ
ಓಂ ಸಪ್ತಪಾತಾಲಚರಣಾಯ ನಮಃ
ಓಂ ಸಪ್ತದ್ವೀಪೋರುಮಂಡಲಾಯ ನಮಃ 80

ಓಂ ಸಪ್ತಸ್ವರ್ಲೋಕಮುಕುಟಾಯ ನಮಃ 
ಓಂ ಸಪ್ತಸಾಪ್ತಿವರಪ್ರದಾಯ ನಮಃ
ಓಂ ಸಪ್ತಾಂಗರಾಜ್ಯಸುಖದಾಯ ನಮಃ
ಓಂ ಸಪ್ತರ್ಷಿಗಣಮಂಡಿತಾಯ ನಮಃ
ಓಂ ಸಪ್ತಛನ್ದೋನಿಧಯೇ ನಮಃ
ಓಂ ಸಪ್ತಹೋತ್ರೇ ನಮಃ
ಓಂ ಸಪ್ತಸ್ವರಾಶ್ರಯಾಯ ನಮಃ
ಓಂ ಸಪ್ತಾಬ್ಧಿಕೇಲಿಕಾಸಾರಾಯ ನಮಃ
ಓಂ ಸಪ್ತಮಾತೃನಿಷೇವಿತಾಯ ನಮಃ
ಓಂ ಸಪ್ತಛನ್ದೋ ಮೋದಮದಾಯ ನಮಃ 90

ಓಂ ಸಪ್ತಚಂದ್ರಮಖಪ್ರಭವೇ ನಮಃ
ಓಂ ಸಾಮಪಂಚದಶಾಯ ನಮಃ
ಓಂ ಸಪ್ತದಶಾಯ ನಮಃ
ಓಂ ಸಪ್ತದಶಾಕ್ಷರಾಯ ನಮಃ
ಓಂ ಸಹಸ್ರಪತ್ರನಿಲಯಾಯ ನಮಃ
ಓಂ ಸಹಸ್ರಫಣಭೂಷಣಾಯ ನಮಃ
ಓಂ ಸಹಸ್ರಶೀರ್ಷ್ಣೇ ಪುರುಷಾಯ ನಮಃ
ಓಂ ಸಹಸ್ರಾಕ್ಷಾಯ ನಮಃ
ಓಂ ಸಹಸ್ರಪದೇ ನಮಃ
ಓಂ ಸಾಮಬೃಂಹಿತಾಯ ನಮಃ 100

ಓಂ ಸ್ವರ್ಣವರ್ಣಾಯ ನಮಃ
ಓಂ ಸ್ವರ್ಧುನೀಭವಾಯ ನಮಃ
ಓಂ ಸರ್ವದುಃಖಪ್ರಶಮನಾಯ ನಮಃ
ಓಂ ಸರ್ವವಿಘ್ನವಿನಾಶಕಾಯ ನಮಃ
ಓಂ ಸರ್ವಲಕ್ಷಣಸಮ್ಪನ್ನಾಯ ನಮಃ
ಓಂ ಸಹಸ್ರನಾಮ ಸಂಸ್ತುತ್ಯಾಯ ನಮಃ
ಓಂ ಸಹಸ್ರಾಕ್ಷಬಲಾಪಹಾಯ ನಮಃ
ಓಂ ಸಪ್ತಕೋಟಿಮಹಾಮನ್ತ್ರಮನ್ತ್ರಿತಾವ
ಯವದ್ಯುತಯೇ ನಮಃ 108

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ